ಸಜೀಪ ಮೂಡ ಗ್ರಾಮದ ಪ್ರಧಾನ ದೈವಸ್ಥಾನ ಶ್ರೀ ಕ್ಷೇತ್ರ ಮಿತ್ತಮಜಲುಗೆ ಸಂಪರ್ಕಿಸುವ ರಸ್ತೆ ಶ್ರೀ ಶಾರದಾ ಮಂದಿರ ನಗ್ರಿಯಲ್ಲಿ ಬಂಟ್ವಾಳ ಶಾಸಕರಾದ ರಾಜೇಶ್ ನಾಯ್ಕ್ ಉಳಿಪ್ಪಾಡಿಯವರು ಶಿಲಾನ್ಯಾಸ ನೆರವೇರಿಸಿದರು.
ಈ ರಸ್ತೆ ಪಣೋಲಿಬೈಲು ಬೊಳ್ಳಾಯಿ ನಗ್ರಿ ಗ್ರಾಮಸ್ಥರಿಗೆ ನೇರ ಮಿತ್ತಮಜಲು ಕ್ಷೇತ್ರಕ್ಕೆ ತಲುಪಲು ಸಹಕಾರಿಯಾಗುತ್ತದೆ.ಮಾಗಣೆಯ ತಂತ್ರಿಗಳು ಗ್ರಾಮಸ್ಥರ ಸಮ್ಮುಖದಲ್ಲಿ ಶಾಸಕರು ಶಿಲಾನ್ಯಾಸ ನೇರವೆರಿಸಿದರು.
ನಂತರ ಶ್ರೀ ಶಾರದಾ ಸಮುದಾಯ ಭವನದಲ್ಲಿ ನಡೆದ ಕಾರ್ಯಕ್ರಮದಲ್ಲಿ ಭಾಗವಹಿಸಿದರು. ಕಾರ್ಯಕ್ರಮದಲ್ಲಿ ಸ್ಥಳದಾನಿಗಳಿಗೆ ಸ್ಮರಣಿಕೆ ನೀಡಿ ಗೌರವಿಸಲಾಯಿತು.
ರಾಜೇಶ್ ನಾಯ್ಕ್ ಉಳಿಪ್ಪಾಡಿಗುತ್ತು ಇವರು ಎಲ್ಲಾರೂ ಒಗ್ಗಟ್ಟಾಗಿ ಮುಂದೆ ಬಂದು ಸ್ಥಳದಾನ ಮಾಡಿದ ಎಲ್ಲಾರನ್ನು ಮುಕ್ತ ಕಂಠದಿಂದ ಶ್ಲಾಘಿಸಿದರು. ಇದು ನನ್ನ ಬೇರೆ ಕ್ಷೇತ್ರದ ಜನರಿಗೆ ಪ್ರೇರಣೆ ಎಂದು ನುಡಿದರು.
ಕಾರ್ಯಕ್ರಮದಲ್ಲಿ ಗ್ರಾಮದ ಪ್ರಥಮ ಪ್ರಜೆ ಪಂಚಾಯತ್ ಅಧ್ಯಕ್ಷರಾದ ಹರಿಣಾಕ್ಷಿ ಪಟ್ಟುಗುಡ್ಡೆ. ವಿವೇಕ್ ಶೆಟ್ಟಿ ನಗ್ರಿಗುತ್ತು. ಶ್ರೀನಿವಾಸ್ ಭಟ್. ಪಂಚಾಯತ್ ಸದಸ್ಯರುಗಳಾದ ಸುಂದರಿ ನಗ್ರಿ. ಸೀತಾರಾಮ ಅಗೋಳಿಬೆಟ್ಟು . ಪ್ರಶಾಂತ ಪೂಜಾರಿ ವಿಟ್ಲುಕೊಡಿ. ಸೋಮನಾಥ. ವಿಜಯ. ಶೋಭಾ. ಹೇಮಾವತಿ. ಉಪಸ್ಥಿತರಿದ್ದರು.
ಕಾರ್ಯಕ್ರಮದ ಸ್ವಾಗತ ಭಾಷಣ ಮಾಡಿದರವರು ಶ್ರೀ ಶಾರದಾ ಮಂದಿರದ ಅಧ್ಯಕ್ಷರಾದ ಶ್ರೀ ರತ್ನಾಕರ ಪೂಜಾರಿ ನಾಡರ್ . ನಂತರ ಪ್ರಶಾಂತ್ ಪೂಜಾರಿ ವಿಟ್ಲುಕೋಡಿ ಪಂಚಾಯತ್ ಸದಸ್ಯರು ಸಜೀಪಮೂಡ ವಂದಿಸಿದರು.
ಈ ಸಂದರ್ಭದಲ್ಲಿ ರಸ್ತೆಗೆ ಸ್ಥಳದಾನ ಮಾಡಿದವರನ್ನು ಸನ್ಮಾನಿಸಲಾಯಿತು.
ದಿ. ಅಣ್ಣಿ ಭಟ್ ಅವರ ಪತ್ನಿ ಮತ್ತು ಮಕ್ಕಳು.ವೇದಾವತಿ ವಿಠಲ ಶೆಟ್ಟಿ ಅಗರಿ, ಜಯರಾಮ್ ಶೆಟ್ಟಿ ಮತ್ತು ಸಹೋದರರು, ಶ್ರೀ ಲಕ್ಷ್ಮೀ ಮತ್ತು ಮಕ್ಕಳು, ದಿ. ರಾಮ ನಾಯ್ಕ ಮತ್ತು ಮಕ್ಕಳು, ತಿಮ್ಮಪ್ಪ ಪೂಜಾರಿ ಮಂಜೊಟ್ಟಿ, ಶ್ರೀಮತಿ ಕಲ್ಯಾಣಿ ಮತ್ತು ಮಕ್ಕಳು, ವಸಂತಿ ಮತ್ತು ಸಂಜೀವಿನಿ, ಶ್ರೀಮತಿ ಯಶೋಧ ಮತ್ತು ಬಾಲಕೃಷ್ಣ ಇವರನ್ನು ಸನ್ಮಾನಿಸಿದರು.