Saturday, May 18, 2024
Homeತಾಜಾ ಸುದ್ದಿಬೆಳ್ತಂಗಡಿ: ಕಾಜೂರಿನ ಅಭಿವೃದ್ಧಿಯ ವಿಚಾರದಲ್ಲಿ ಶಾಸಕರ ಕೊಡುಗೆ ಮಹತ್ವದ್ದು: ಶಾಸಕ ಹರೀಶ್‌ ಪೂಂಜಾ ಕೊಡುಗೆ ಬಗ್ಗೆ...

ಬೆಳ್ತಂಗಡಿ: ಕಾಜೂರಿನ ಅಭಿವೃದ್ಧಿಯ ವಿಚಾರದಲ್ಲಿ ಶಾಸಕರ ಕೊಡುಗೆ ಮಹತ್ವದ್ದು: ಶಾಸಕ ಹರೀಶ್‌ ಪೂಂಜಾ ಕೊಡುಗೆ ಬಗ್ಗೆ ಸಲೀಂ ವ್ಯಂಗ್ಯ ಖಂಡನೀಯ – ಅಹ್ಮದ್‌ ಬಾವಾ

spot_img
- Advertisement -
- Advertisement -

ಬೆಳ್ತಂಗಡಿ: ಕಾಜೂರಿನ ಅಭಿವೃದ್ಧಿಯ ವಿಚಾರದಲ್ಲಿ ಶಾಸಕರ ಕೊಡುಗೆ ಅತ್ಯಂತ ಮಹತ್ವದ್ದಾಗಿದೆ. ಆದರೆ ಇತ್ತೀಚೆಗೆ ಪತ್ರಿಕಾಗೋಷ್ಟಿ ನಡೆಸಿ ಗುರುವಾಯನಕೆರೆಯ ಸಲೀಂ ಎಂಬುವರು ಕಾಜೂರಿಗೆ ಶಾಸಕರು ನೀಡಿದ ಕೊಡುಗೆಯನ್ನು ಅತ್ಯಂತ ವ್ಯಂಗ್ಯವಾದ ರೀತಿಯಲ್ಲಿ ಮಾತನಾಡಿದ್ದು ಇದನ್ನು ನಾವು ಖಂಡಿಸುತ್ತೇವೆ ಎಂದು ಬೆಳ್ತಂಗಡಿ ಬಿಜೆಪಿ ಅಲ್ಪಸಂಖ್ಯಾತ ಮೋರ್ಚಾ ಉಪಾಧ್ಯಕ್ಷ ಅಹಮ್ಮದ್ ಭಾವಾ ಹೇಳಿದರು.

ಅವರು ಬೆಳ್ತಂಗಡಿ ಅಂಬೇಡ್ಕರ್ ಭವನದಲ್ಲಿ ಜು04 ರಂದು ಕರೆದಿದ್ದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದರು. ತಾಲೂಕಿನ ಇತಿಹಾಸ ಪ್ರಸಿದ್ಧ ಪುಣ್ಯ ಕ್ಷೇತ್ರವಾಗಿರುವ ಕಾಜೂರಿನ ಅಭಿವೃದ್ಧಿಗೆ ಬೆಳ್ತಂಗಡಿ ಶಾಸಕ ಹರೀಶ್ ಪೂಂಜ ಅವರು ಯಾವುದೇ ತಾರತಮ್ಯ ಮಾಡದೇ ಎಲ್ಲಾ ರೀತಿಯ ಸಹಕಾರ ಮತ್ತು ನೆರವನ್ನು ನೀಡುತ್ತಾ ಬಂದಿದ್ದಾರೆ.ಇದಕ್ಕಾಗಿ ಶಾಸಕರನ್ನು ಅಭಿನಂದಿಸುತ್ತೇವೆ.

ಬೆಳ್ತಂಗಡಿ ತಾಲೂಕಿನಲ್ಲಿ ನೆರೆ ಬಂದಾಗ ಅತಿ ಹೆಚ್ಚು ಸಮಸ್ಯೆಗೆ ಒಳಗಾಗಿದ್ದ ಕಾಜೂರು ಪ್ರದೇಶದ ಜನರ ಸಮಸ್ಯೆಗೆ ತಕ್ಷಣವೇ ಸ್ಪಂದಿಸಿದ ಶಾಸಕರು ಎಲ್ಲ ರೀತಿಯ ನೆರವನ್ನೂ ಯಾವುದೇ ಜಾತಿ ಧರ್ಮದ ತಾರತಮ್ಯ ತೋರದೆ ನೀಡಿದ್ದಾರೆ. ಇದು ಕಾಜೂರಿನ ಎಲ್ಲ ಜನರಿಗೂ ತಿಳಿದಿರುವ ವಿಚಾರವಾಗಿದೆ. ಇದೀಗ ಕಾಜೂರು ದರ್ಗಾದ ಆಡಳಿತ ಸಮಿತಿಯ ಹಾಗೂ ಜನರ ಬಹು ದಿನಗಳ ಬೇಡಿಕೆಯಾಗಿದ್ದ ಯಾತ್ರಾರ್ಥಿಗಳ ಅನುಕೂಲಕ್ಕಾಗಿ ಮುಸಾಫಿರ್ ಖಾನ ಕಟ್ಟಡವನ್ನು ನಿರ್ಮಿಸಲು ಶಾಸಕ ಹರೀಶ್ ಪೂಂಜ ಅವರ ಶಿಫಾರಸ್ಸಿನ ಮೇಲೆ ರಾಜ್ಯ ವಕ್ಸ್ ಸಚಿವೆ ಶಶಿಕಲಾ ಜೊಲ್ಲೆ ಹಾಗೂ ರಾಜ್ಯ ವಕ್ಸ್ ಮಂಡಳಿಯ ಅಧ್ಯಕ್ಷ ಶಾಫಿ ಸ ಅದಿಯವರ ಪ್ರಯತ್ನದಿಂದ ಇದೀಗ 1.5ಕೋಟಿ ರೂ ಅನುದಾನವನ್ನು ಬಿಡುಗಡೆ ಮಾಡಿದ್ದು ಇದನ್ನು ನಾವೆಲ್ಲರೂ ಸ್ವಾಗತಿಸುತ್ತೇವೆ ಹಾಗೂ ಅದಕ್ಕಾಗಿ ಶಾಸಕರು ಹಾಗೂ ಸರಕಾರವನ್ನು ಅಭಿನಂದಿಸುತ್ತೇವೆ.

ಇದಲ್ಲದೆ ರಸ್ತೆ ಸೇರಿದಂತೆ ಇತರ ಎಲ್ಲ ಅಭಿವೃದ್ಧಿ ಕಾರ್ಯಗಳಿಗೂ ಶಾಸಕ ಹರೀಶ್ ಪೂಂಜ ಅವರು ಎಲ್ಲರೀತಿಯ ಸಹಕಾರವನ್ನು ನೀಡುತ್ತಾ ಕೆಲವರು ವಿನಾಃ ಕಾರಣ ನೀಡಿ “ಇಲ್ಲ ಸಲ್ಲದ ಆರೋಪಗಳನ್ನು ಮಾಡುತಿದ್ದಾರೆ. ಕಾಜೂರಿನ ವಿಚಾರ ನೋಡಿಕೊಳ್ಳಲು ಅಲ್ಲಿ ಆಡಳಿತ ಮಂಡಳಿಯಿದೆ ಕಾಜೂರಿನ ಜನರಿದ್ದಾರೆ ಅದಕ್ಕೆ ಸಲೀಂ ಅವರ ಎಚ್ಚರಿಕೆಯೂ ಬೇಡ ಸಲಹೆಯೂ ಬೇಕಾಗಿಲ್ಲ. ಅಭಿವೃದ್ಧಿಯ ವಿಚಾರದಲ್ಲಿ ಅನಗತ್ಯವಾಗಿ ರಾಜಕೀಯವನ್ನು ತಂದು ಗೊಂದಲ ಸೃಷ್ಟಿಸಿ ಅಭಿವೃದ್ಧಿಗೆ ತೊಡಕನ್ನುಂಟುಮಾಡುವುದು ಸರಿಯಲ್ಲ ಇದನ್ನು ನಾವು ಖಂಡಿಸುತ್ತೇವೆ. ಶಾಸಕರ ನೇತೃತ್ವದಲ್ಲಿ ನಡೆಯುತ್ತಿರುವ ಎಲ್ಲ ಅಭಿವೃದ್ಧಿ ಕಾರ್ಯಗಳಿಗೂ ನಮ್ಮ ಬೆಂಬಲ ಸದಾ ಇದೆ ಎಂದರು.

ಪತ್ರಿಕಾಗೋಷ್ಠಿಯಲ್ಲಿ ಕಾಜೂರು ಆಡಳಿತ ಮಂಡಳಿ ಸದಸ್ಯ ಬದ್ರುದ್ದೀನ್, ಜಮಾತ್ ನ ಅಬ್ದುಲ್ ಅಜೀಜ್, ಹಂಸ, ಹಾಗೂ ಮಹಮ್ಮದ್ ಉಜಿರೆ ಉಪಸ್ಥಿತರಿದ್ದರು.

- Advertisement -
spot_img

Latest News

error: Content is protected !!