- Advertisement -
- Advertisement -
ಕಾಸರಗೋಡು: ಕಳ್ಳನೊಬ್ಬ ಪರ್ಸ್ ಎಗರಿಸಿ ಅದರಲ್ಲಿದ್ದ ದಾಖಲೆಗಳನ್ನು ಪೋಸ್ಟ್ ಮೂಲಕ ಅದರ ವಾರಸುದಾರರಿಗೆ ತಲುಪಿಸಿದ ಘಟನೆ ಕಾಸರಗೋಡಿನಲ್ಲಿ ನಡೆದಿದೆ.
ಪೊಯಿನಾಚಿಯ ಕೆ. ಮಾಧವನ್ ನಾಯರ್ ಎಂಬುವವರ ಪರ್ಸ್ ಬಸ್ನಲ್ಲಿ ಕಳ್ಳತನವಾಗಿತ್ತು. ಅದರಲ್ಲಿ ಡ್ರೈವಿಂಗ್ ಲೈಸನ್ಸ್, ಪಾನ್ ಕಾರ್ಡ್, ಎಟಿಎಂ ಕಾರ್ಡ್, ಆಧಾರ್ ಕಾರ್ಡ್ ಇತ್ಯಾದಿಗಳಿದ್ದವು. ಹೀಗಾಗಿ ಮ್ಮ ಪರ್ಸ್ ಕಳವಾಗಿರುವ ಕುರಿತು ಸ್ಥಳೀಯಪತ್ರಿಕೆಯಲ್ಲಿ ಜಾಹೀರಾತು ನೀಡಿದ್ದ ಅವರು ದಾಖಲೆ ಪತ್ರ ಸಿಕ್ಕಿದವರು ಮರಳಿಸುವಂತೆ ಕೋರಿದ್ದರು. ಕಳವಾದ ಮೂರನೇ ದಿನಕ್ಕೆ ಅವರ ಪರ್ಸ್ ನಲ್ಲಿದ್ದ ಎಲ್ಲ ದಾಖಲೆಗಳು ಅಂಚೆ ಮೂಲಕ ಅವರ ಕೈಸೇರಿದ್ದು, 7 ಸಾವಿರ ರೂ.ಗಳನ್ನು ಕಳ್ಳ ಇರಿಸಿಕೊಂಡಿದ್ದಾನೆ.
- Advertisement -