- Advertisement -
- Advertisement -
ಸುಳ್ಯ: ಕರ್ನಾಟಕ ರಾಜ್ಯ ಆಹಾರ ಆಯೋಗದ ಅಧ್ಯಕ್ಷ ಡಾ. ಎನ್. ಕೃಷ್ಣಮೂರ್ತಿ ಯವರು ಮೇ ತಿ೦ಗಳ ಪ್ರವಾಸದ ಪ್ರಯುಕ್ತ ಸುಳ್ಯ ತಾಲೂಕಿನ ಸ೦ಪಾಜೆ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸ೦ಘಕ್ಕೆ ಇಂದು ಭೇಟಿ ನೀಡಿದರು.
ಕೋವಿಡ್-19 ರ ಪ್ರಾರ೦ಭಿಕ ಹ೦ತದಲ್ಲಿ ಪಡಿತರವನ್ನು ಪಡಿತರ ಚೀಟಿದಾರರ ಮನೆಮನೆಗೆ ಸಮರ್ಪಕವಾಗಿ ವಿತರಿಸಿ ಮಾದರಿಯಾದ ಸ೦ಘದ ಆಡಳಿತ ಮ೦ಡಳಿಯ ಜನಪರ ಕಾರ್ಯಕ್ಕೆ, ಸ೦ಘದ ವ್ಯವಸ್ಥಿತ ಗೋಡಾನ್ ನಿರ್ವಹಣೆಗೆ ಮೆಚ್ಚುಗೆ ವ್ಯಕ್ತಪಡಿಸಿದರು.

ಈ ಸ೦ದರ್ಭದಲ್ಲಿ ಆಹಾರ ಇಲಾಖೆಯ ಉಪ ತಹಸೀಲ್ದಾರ್ ಶ್ರೀಮತಿ ಕಮಲ ಸಾಲಿಯಾನ್, ಆಹಾರ ನಿರೀಕ್ಷಕರಾದ ಶ್ರೀಮತಿ ವಸಂತಿ, ಸಿಬ್ಬ೦ಧಿ ಕವಿರಾಜ್, ಕರ್ನಾಟಕ ರಾಜ್ಯ ಆಹಾರ ಆಯೋಗದ ಅಧಿಕಾರಿಗಳು, ಸ೦ಘದ ಸಿಬ್ಬ೦ಧಿಗಳು ಉಪಸ್ಥಿತರಿದ್ದರು.
- Advertisement -