- Advertisement -
- Advertisement -
ಬೆಂಗಳೂರು; ಬ್ಯಾಂಕಾಕ್ ನಲ್ಲಿ ನಿಧನರಾದ ನಟ ವಿಜಯರಾಘವೇಂದ್ರ ಅವರ ಪತ್ನಿ ಸ್ಪಂದನಾ ಮೃತದೇಹ ನಾಳೆ ಬೆಂಗಳೂರಿಗೆ ಆಗಮಿಸಲಿದೆ.
ಈಗಾಗಲೇ ಕುಟುಂಬಸ್ಥರು ಬ್ಯಾಂಕಾಕ್ ಗೆ ತೆರಳಿದ್ದಾರೆ. ಸ್ಪಂದನಾ ತಂದೆ ಬಿ ಕೆ ಶಿವಾರಾಂ, ಸಹೋದರ ರಕ್ಷಿತ್ ಶಿವಾರಾಂ ಮಂಗಳೂರಿನಿಂದ ಬ್ಯಾಂಕಾಕ್ ಗೆ ತೆರಳಿದ್ದಾರೆ.
ಇನ್ನು ಸ್ಪಂದನಾ ಅವರ ಪಾರ್ಥೀವ ಶರೀರವನ್ನು ಬೆಂಗಳೂರಿಗೆ ತರಲು ಥೈಲ್ಯಾಂಡ್ ಸರಕಾರದ (ಎಂಬೆಸಿ) ಯಲ್ಲಿ ವಿಜಯ ರಾಘವೇಂದ್ರ ಸ್ನೇಹಿತರು ಕಾನೂನು ಪ್ರಕ್ರಿಯೆ ನಡೆಸುತ್ತಿದ್ದಾರೆ ಎನ್ನಲಾಗಿದೆ.
- Advertisement -