- Advertisement -
![]()
- Advertisement -
ಮಂಗಳೂರು: ಮಂಗಳೂರು ದಕ್ಷಿಣ ವಲಯ-1ರ ವ್ಯಾಪ್ತಿಯ ವಿವಿಧ ಪ್ರದೇಶಗಳಲ್ಲಿ ಅಬಕಾರಿ ಅಧಿಕಾರಿಗಳು ದಾಳಿ ನಡೆಸಿ ಗಾಂಜಾ ವ್ಯಸನ ಮಾಡುತ್ತಿದ್ದ ಏಳು ವಿದ್ಯಾರ್ಥಿಗಳನ್ನು ಬುಧವಾರ ಬಂಧಿಸಿದ್ದಾರೆ.
ಅನೀಶ್, ಅಭಿರಾಮ್, ಮಹಮ್ಮದ್ ಮಾರ್ವನ್, ರಿಲ್ಲಾಶ್, ಹರ್ಷ, ಮಹಮ್ಮದ್ ಸನನ್ ಮತ್ತು ರಮ್ಯಾನ್ ಬಂಧಿತ ಆರೋಪಿಗಳು.
ಬಂಧಿಸಲ್ಪಟ್ಟ ಎಲ್ಲಾ ಆರೋಪಿಗಳು ಕಾಲೇಜಿನ ವಿದ್ಯಾರ್ಥಿಗಳಾಗಿದ್ದು ಅವರ ವಿರುದ್ಧ ಪ್ರಕರಣಗಳನ್ನು ದಾಖಲಿಸಿ ಮಾನ್ಯ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ. ಕಾರ್ಯಾಚರಣೆಯಲ್ಲಿ ಅಬಕಾರಿ ನಿರೀಕ್ಷಕರಾದ ಶ್ರೀಮತಿ ಸೀಮಾ ಸುವಾರೀಸ್, ಅಬಕಾರಿ ಉಪ ನಿರೀಕ್ಷಕರಾದ ಶ್ರೀ ಶಂಕರ್ ಕೆ . ಮತ್ತು ಸಿಬ್ಬಂದಿಗಳಾದ ಶ್ರೀ.ಸಂತೋಷ್ ಕುಮಾರ್ , ಶ್ರೀ ಸುನಿಲ್ ಶೇಟ್ ಬೈಂದೂರ್, ಶ್ರೀ ಕುಮಾರ್ ಆರ್. ನೀಲನಾಯ್ಕ ಮತ್ತು ಶ್ರೀ ಸಂದೀಪ್ ಕುಮಾರ್ ಭಾಗಿಯಾಗಿದ್ದರು.
- Advertisement -


