- Advertisement -
- Advertisement -
ಬಂಟ್ವಾಳ: ಬೋಳಿಯಾರಿನಲ್ಲಿ ಬಿಜೆಪಿ ವಿಜಯೋತ್ಸವ ಮೆರವಣಿಗೆ ಬಳಿಕ ಇಬ್ಬರು ಬಿಜೆಪಿ ಕಾರ್ಯಕರ್ತರಿಗೆ ಚೂರಿ ಇರಿತ ಪ್ರಕರಣಕ್ಕೆ ಸಂಬಂಧಿಸಿದಂತೆ ಮತ್ತೆ ಏಳು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.
ಇರ್ಷಾದ್, ಇಮ್ರಾನ್, ಶರ್ವಾನ್, ತಾಜುದ್ದೀನ್, ಅಶ್ರಫ್, ಮುಬಾರಕ್ ಮತ್ತು ತಲ್ಲತ್ ಬಂಧಿತ ಆರೋಪಿಗಳಾಗಿದ್ದು, ಪ್ರಕರಣದಲ್ಲಿ ಒಟ್ಟು ಹದಿಮೂರು ಆರೋಪಿಗಳ ಬಂಧನವಾಗಿದೆ.
ಈ ಮೊದಲು ಆರು ಆರೋಪಿಗಳನ್ನು ಕೊಣಾಜೆ ಪೊಲೀಸರು ಅರೆಸ್ಟ್ ಮಾಡಿದ್ದರು.ಬಂಟ್ವಾಳ ತಾಲೂಕಿನ ಬೋಳಿಯಾರಿನಲ್ಲಿ ಜೂನ್ 9ರಂದು ನಡೆದಿದ್ದ ಘಟನೆಯಲ್ಲಿ ಹರೀಶ್ ಮತ್ತು ನಂದಕುಮಾರ್ ಎಂಬ ಇಬ್ಬರು ಬಿಜೆಪಿ ಕಾರ್ಯಕರ್ತರು ಚೂರಿ ಇರಿತಕ್ಕೊಳಗಾಗಿದ್ದರು.
- Advertisement -