Thursday, May 16, 2024
Homeಕರಾವಳಿಸುಳ್ಯ; ಸ್ಕೂಟಿ ಹಾಗೂ ಬಸ್ ಮಧ್ಯೆ ಅಪಘಾತ; ಸ್ಕೂಟಿ ಸವಾರ ಸಾವು

ಸುಳ್ಯ; ಸ್ಕೂಟಿ ಹಾಗೂ ಬಸ್ ಮಧ್ಯೆ ಅಪಘಾತ; ಸ್ಕೂಟಿ ಸವಾರ ಸಾವು

spot_img
- Advertisement -
- Advertisement -

ಸುಳ್ಯ; ಸ್ಕೂಟಿ ಹಾಗೂ ಬಸ್ ಮಧ್ಯೆ ಅಪಘಾತವಾಗಿ ಸ್ಕೂಟಿ ಸವಾರ ಸಾವನ್ನಪ್ಪಿರುವ ಘಟನೆ ಸುಳ್ಯ ತಾಲೂಕಿನ ಜಾಲ್ಸೂರು-ಸುಬ್ರಹ್ಮಣ್ಯ ರಾಜ್ಯ‌ ಹೆದ್ದಾರಿಯ ಗುತ್ತಿಗಾರು ಸಮೀಪದ ಬಾಕಿಲ ಎಂಬಲ್ಲಿ ನಡೆದಿದೆ. ನಾಲ್ಕೂರಿನ ಶಿವರಾಮ ಮೃತ ಸ್ಕೂಟಿ ಸವಾರ.

ಸುಬ್ರಹ್ಮಣ್ಯದಿಂದ ಮೈಸೂರಿಗೆ ಪ್ರಯಾಣಿಸುತ್ತಿದ್ದ ಕೆ ಎಸ್ ಆರ್ ಟಿಸಿ ಬಸ್ ಬಾಕಿಲ ತಿರುವಿನಲ್ಲಿ ನಾಲ್ಕೂರಿನ ಶಿವರಾಮ ಎಂಬವರು ಚಲಾಯಿಸುತ್ತಿದ್ದ ಸ್ಕೂಟಿಗೆ ಡಿಕ್ಕಿ ಹೊಡೆದಿದೆ.ಪರಿಣಾಮ ಬಸ್ ಸ್ಕೂಟಿಯನ್ನು ಬಸ್ ಒಂದಷ್ಟು ದೂರ ಎಳೆದುಕೊಂಡು ಹೋಗಿದೆ.

ಘಟನೆಯಲ್ಲಿ ಗಂಭೀರವಾಗಿ ಗಾಯಗೊಂಡಿದ್ದ ಸ್ಕೂಟಿ ಸವಾರ ಶಿವರಾಮ ಅವರನ್ನು ಆಸ್ಪತ್ರೆಗೆ ದಾಖಲಿಸುವ ವೇಳೆ ಅವರುಮೃತಪಟ್ಟಿದ್ದಾರೆ. ಜೊತೆಯಲ್ಲಿದ್ದ ಅವರ ಮಗಳು ಗಂಭೀರವಾಗಿ ಗಾಯಗೊಂಡಿದ್ದು, ಆಕೆಯನ್ನು ಮಂಗಳೂರಿನ ಎಜೆ ಆಸ್ಪತ್ರೆಗೆ ದಾಖಲಿಸಲಾಗಿದೆ. ಸುಬ್ರಹ್ಮಣ್ಯ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

- Advertisement -
spot_img

Latest News

error: Content is protected !!