- Advertisement -
- Advertisement -
ಕಡಬ: ನಿವೃತ್ತಿಗೆ ಒಂದು ದಿನ ಮೊದಲು ಶಿಕ್ಷಕ ಹೃದಯಾಘಾತದಿಂದ ನಿಧನವಾಗಿರುವ ಘಟನೆ ನೆಲ್ಯಾಡಿ ಗ್ರಾಮದಲ್ಲಿ ನಡೆದಿದೆ. ಕಡಬ ತಾಲೂಕಿನ ಹೊಸಮಜಲು ಸರಕಾರಿ ಶಾಲೆಯ ದೈಹಿಕ ಶಿಕ್ಷಕ ಆನಂದ ಗೌಡ(59) ಮೃತ ವ್ಯಕ್ತಿ. ಇವರು ಶುಕ್ರವಾರ ರಾತ್ರಿ ಹೃದಯಾಘಾತದಿಂದ ನಿಧನರಾಗಿದ್ದಾರೆ.
ಮೂಲತ: ಕಡಬ ತಾಲೂಕಿನ ಆಲಂಕಾರು ನಿವಾಸಿಯಾಗಿದ್ದ ಆನಂದ ಗೌಡ ಅವರು ನೆಲ್ಯಾಡಿ ಗ್ರಾಮದ ಕೊಲ್ಯೊಟ್ಟು ಎಂಬಲ್ಲಿ ವಾಸವಾಗಿದ್ದರು .ಆನಂದ ಗೌಡರವರಿಗೆ ರಾತ್ರಿ ಎದೆನೋವು ಕಾಣಿಸಿಕೊಂಡಿದ್ದು ಮನೆಯವರು ಆಸ್ಪತ್ರೆಗೆ ಕರೆದೊಯ್ಯಲು ಸಿದ್ಧತೆ ಮಾಡುತ್ತಿದ್ದಂತೆ ಅವರು ನಿಧನರಾಗಿದ್ದಾರೆ ಎನ್ನಲಾಗಿದೆ.
- Advertisement -