- Advertisement -
- Advertisement -
ಮಂಗಳೂರು: ಜಿಲ್ಲೆಯ ಕೋವಿಡ್ ಆಸ್ಪತ್ರೆ ವೆನ್ಲಾಕ್ ನಿಂದ ನಿನ್ನೆ ತಪ್ಪಿಸಿಕೊಂಡಿದ್ದ ಕೊರೋನಾ ದೃಢವಾಗಿದ್ದ ಪುತ್ತೂರು ಮೂಲದ ಯುವಕನನ್ನು ಇಂದು ಪತ್ತೆ ಮಾಡಲಾಗಿದೆ.
ಕೊರೋನಾ ವೈರಸ್ ನ ಲಕ್ಷಣಗಳು ಗೋಚರವಾದ ಮೇಲೆ ಜುಲೈ 1ರಂದು ವೆನ್ಲಾಕ್ ಕೋವಿಡ್ ಆಸ್ಪತ್ರೆಗೆ ಬಂದಿದ್ದ. ಈತನನ್ನು ದಾಖಲಿಸಿಕೊಂಡ ವೈದ್ಯರು ಚಿಕಿತ್ಸೆ ನೀಡುತ್ತಿದ್ದರು. ರವಿವಾರ ಈತನಿಗೆ ಕೋವಿಡ್ ಸೋಂಕು ದೃಢವಾಗಿತ್ತು. ಆದರೆ ರವಿವಾರ ಸಂಜೆ ನಾಲ್ಕು ಗಂಟೆಯ ಸಮಯಕ್ಕೆ ಆಸ್ಪತ್ರೆಯ ವಾರ್ಡ್ ನಿಂದ ತಪ್ಪಿಸಿಕೊಂಡಿದ್ದ.
ಇಂದು ಈತನನ್ನು ಪೊಲೀಸರಾದ ಶಂಕರಪ್ಪ ಲಮಾಣಿ ಮತ್ತು ಶಂಕರಪ್ಪ ನಂಡ್ಯಾಲ್ ರು ಪತ್ತೆ ಮಾಡಿದ್ದಾರೆ.
ಆಸ್ಪತ್ರೆಯಿಂದ ಪರಾರಿಯಾಗಿರುವ ಸೋಂಕಿತ ನಿನ್ನೆಯಿಂದ ಇಂದಿನವರೆಗೆ ತನಗೆ ತಿಳಿಯದಂತೆ ಅನೇಕರಿಗೆ ಸೋಂಕು ಹರಡಿಸಿರಬಹುದು ಎಂದು ಮಂಗಳೂರು ಪೊಲೀಸ್ ಆಯುಕ್ತ ವಿಕಾಸ್ ಕುಮಾರ್ ತನ್ನ ಟ್ವೀಟ್ ನಲ್ಲಿ ಆತಂಕ ವ್ಯಕ್ತಪಡಿಸಿದ್ದಾರೆ.
- Advertisement -