Tuesday, May 7, 2024
Homeಕರಾವಳಿಬೆಳ್ತಂಗಡಿ: ಶಾಲೆಗೆ ಕನ್ನಹಾಕಿದ ಖದೀಮರು - ದಾಖಲೆ ಪತ್ರಗಳನ್ನು ಸುಟ್ಟು ಹಾಕಿ ಹಣಕ್ಕಾಗಿ ಹುಡುಕಾಟ

ಬೆಳ್ತಂಗಡಿ: ಶಾಲೆಗೆ ಕನ್ನಹಾಕಿದ ಖದೀಮರು – ದಾಖಲೆ ಪತ್ರಗಳನ್ನು ಸುಟ್ಟು ಹಾಕಿ ಹಣಕ್ಕಾಗಿ ಹುಡುಕಾಟ

spot_img
- Advertisement -
- Advertisement -

ಬೆಳ್ತಂಗಡಿ: ಅಳದಂಗಡಿ ಇಲ್ಲಿಯ ಪಿಲ್ಯ ಗುಡ್ ಫ್ಯೂಚರ್ ಆಂಗ್ಲ ಮಾಧ್ಯಮ ಶಾಲೆಯ ಬೀಗವನ್ನು ಮುರಿದು ಒಳ ನುಗ್ಗಿದ ಕಳ್ಳರು ದಾಖಲೆ ಪತ್ರಗಳನ್ನು ಸುಟ್ಟು ಹಾಕಿ, ಹಣಕ್ಕಾಗಿ ಹುಡುಕಾಡಿದ ಘಟನೆ ಅ.26 ರಂದು ರಾತ್ರಿ ನಡೆದಿದೆ.

ಶಾಲೆಯ ಎದುರಿನ ಬಾಗಿಲಿನ ಬೀಗವನ್ನು ಮುರಿದು ಒಳನುಗ್ಗಿದ ಕಳ್ಳರು ಗೋದ್ರೇಜಿನ ಬೀಗವನ್ನು ಒಡೆದು ತೆಗೆದು, ಅದರಲ್ಲಿ ಹಣಕ್ಕಾಗಿ ಹುಡುಕಾಟ ನಡೆಸಿದ್ದಾರೆ. ಅಲ್ಲದೆ ವಿವಿಧ ದಾಖಲೆ ಪತ್ರಗಳನ್ನು ಬೆಂಕಿಹಾಕಿ ಸುಟ್ಟಿರುವುದು ಕಂಡು ಬಂದಿದೆ.
ಇದು ಹಣಕ್ಕಾಗಿ ಕಳ್ಳರು ನಡೆಸಿದ ಕೃತ್ಯವೇ ಅಥವಾ ದುರುದ್ದೇಶದಿಂದ ನಡೆದ ಕೃತ್ಯವೋ ಎಂದು ತನಿಖೆಯಿಂದ ಇನ್ನಷ್ಟೇ ತಿಳಿದು ಬರಬೇಕಾಗಿದೆ.

ಜೊತೆಗೆ ಶಾಲೆಗೆ ಅಳವಡಿಸಲಾಗಿದ್ದ ಸಿಸಿಟಿವಿ ಕ್ಯಾಮರಾದ ವಯರನ್ನು ಕಳ್ಳರು ಸುಟ್ಟುಹಾಗಿದ್ದಾರೆ. ಬೆಳಿಗ್ಗೆ ಶಾಲಾ ಮುಖ್ಯ ಶಿಕ್ಷಕರು ಬಂದು ನೋಡಿದ ವೇಳೆ ಈ ಘಟನೆ ಬೆಳಕಿಗೆ ಬಂದಿದೆ.

ಈ ಸಂಬಂಧ ವೇಣೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಸ್ಥಳಕ್ಕೆ ಭೇಟಿ ನೀಡಿದ್ದು, ಪರಿಶೀಲನೆ ನಡೆಸುತ್ತಿದ್ದಾರೆ.

- Advertisement -
spot_img

Latest News

error: Content is protected !!