- Advertisement -
- Advertisement -
ಬೆಳ್ತಂಗಡಿ: ಸಾವಿರಾರು ವಿದ್ಯಾರ್ಥಿಗಳ ಭವಿಷ್ಯ ರೂಪಿಸಿದ ನಿವೃತ್ತ ಶಿಕ್ಷಕಿ, ಕೊಡುಗೈ ದಾನಿ ಉರುವಾಲು ಗ್ರಾಮದ ಕಜೆ ನಿವಾಸಿ ಶ್ರೀಮತಿ ಶಾರದಾ ರವರು ಇಂದು ಬೆಳಗ್ಗೆ ವಿಧಿವಶರಾಗಿದ್ದಾರೆ. ಅವರಿಗೆ ಸುಮಾರು 82 ವರ್ಷ ವಯಸ್ಸಾಗಿತ್ತು. ಇವರು ಕಣಿಯೂರು ಗ್ರಾಮ ಪಂಚಾಯತ್ ಮಾಜಿ ಅಧ್ಯಕ್ಷರಾದ ಗಣೇಶ ಪ್ರಸಾದ್ ಕೆರ್ಮುಣ್ಣಾಯ ರವರ ತಾಯಿ.
ಮೃತರು ಮಕ್ಕಳಾದ ಡಾ.ಶ್ರೀಶ ಕುಮಾರ್, ರಾಘವೇಂದ್ರ ಪ್ರಸಾದ್, ದೇವಿಪ್ರಸಾದ್,ಗಣೇಶ್ ಪ್ರಸಾದ್, ರಾಜೇಶ್ವರಿ, ವೀಣಾ ಮತ್ತು ರಾಜ ಲಕ್ಷ್ಮೀ ಹಾಗೂ ಅಪಾರ ಶಿಷ್ಯವರ್ಗದವರು, ಬಂಧುಮಿತ್ರರನ್ನು ಅಗಲಿದ್ದಾರೆ.
- Advertisement -