- Advertisement -
- Advertisement -
ಬಂಟ್ವಾಳ ತಾಲೂಕು ಮಾಣಿ ಗ್ರಾಮದ ಮಾಣಿಗುತ್ತು ಶ್ರೀ ಉಳ್ಳಾಲ್ತಿ, ಬೆಮ್ಮೆರ್, ಗುಡ್ಡೆಚಾಮುಂಡಿ, ಪಂಜುರ್ಲಿ, ಮಲೆಕೊರತಿ ದೈವಗಳಿಗೆ ನೂತನ ಚಾವಡಿ ನಿರ್ಮಾಣಗೊಳ್ಳಲಿರುವ ಕಾರಣ ಪೂರ್ವಭಾವಿಯಾಗಿ ಅನುಜ್ಞಾ ಕಲಶ, ಬಾಲಲಯದಲ್ಲಿ ಪ್ರತಿಷ್ಟೆಯು ಬ್ರಹ್ಮಶ್ರೀ ನೀಲೇಶ್ವರ ಉಚ್ಚಿಲತ್ತಾಯ ಪದ್ಮನಾಭ ತಂತ್ರಿಗಳವರ ನೇತ್ರತ್ವದಲ್ಲಿ, ಪಳನೀರು ಅನಂತ ಭಟ್ಟರ ಉಪಸ್ಥಿತಿಯಲ್ಲಿ ಮಾಣಿಗುತ್ತುವಿನಲ್ಲಿ ನಡೆಯಿತು.
ಊರ ಪರವೂರ ಗಣ್ಯರು, ಭಕ್ತಾದಿಗಳು ಭಾಗವಹಿಸಿದ್ದರು. ಮಧ್ಯಾಹ್ನ ಅನ್ನಸಂತರ್ಪಣೆ ನಡೆಯಿತು.
- Advertisement -