- Advertisement -
- Advertisement -
ಮಂಗಳೂರು: ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಅಭಿನಯದ ವೇದ ಚಲನಚಿತ್ರದ ಪ್ರಮೋಷನ್ ಕಾರ್ಯಕ್ರಮ ಮಂಗಳೂರಿನಲ್ಲಿ ನಡೆಯಿತು.
ಪಣಂಬೂರು ಬೀಚ್ ನಲ್ಲಿ ನಡೆದ ಪ್ರಮೋಷನ್ ಪ್ರೋಗ್ರಾಂನಲ್ಲಿ ನಟ ಶಿವರಾಜ್ ಕುಮಾರ್, ಗೀತಾ ಶಿವರಾಜ್ ಕುಮಾರ್ ಪಾಲ್ಗೊಂಡಿದ್ದರು.
ಕಾರ್ಯಕ್ರಮದ ಆರಂಭದಲ್ಲಿ ದಿ. ಪುನೀತ್ ರಾಜ್ ಕುಮಾರ್ ಅವರಿಗೆ ಹಾಡಿನ ಮೂಲಕ ನಮನ ಸಲ್ಲಿಸಲಾಯಿತು. ಮೊಬೈಲ್ ಟಾರ್ಚ್ ಮೂಲಕ ಅಭಿಮಾನಿಗಳು ಗೌರವ ಸಲ್ಲಿಸಿದರು.
ನಂತರ ವೇದಿಕೆಯಲ್ಲಿ ಅಕಾಶವೆ ಬೀಳಲಿ ಮೇಲೆ ಹಾಡು ಹಾಡಿದ ಶಿವರಾಜ್ ಕುಮಾರ್, ಹಾಡಿನ ಜೊತೆಯಲ್ಲಿ ನೃತ್ಯ ತಂಡದ ಜೊತೆ ಹೆಜ್ಜೆ ಹಾಕಿದರು.
- Advertisement -