- Advertisement -
- Advertisement -
ಬಂಟ್ವಾಳ: ಬರಿಮಾರು ಶ್ರೀ ಮಹಾಮ್ಮಾಯ ದೇವಸ್ಥಾನದಲ್ಲಿ ಪ್ರತಿ ವರ್ಷ ಜರಗುವ ಸಾನಿಧ್ಯ ಹವನ ಶತಕಾಲಶಾಭಿಷೇಕ ಸಹಸ್ರ ಹೂವಿನ ಪೂಜೆಯು ಪಂಡಿತ್ ಕಾಶಿನಾಥ್ ಆಚಾರ್ಯರ ನೇತೃತ್ವದ ವೈದಿಕ ವೃಂದದವರ ಸಹಕಾರದೊಂದಿಗೆ ಭಾರಿ ವಿಜೃಂಭಣೆಯಿಂದ ಜನವರಿ 6 ರಂದು ಜರುಗಿತು.
ಈ ಕಾರ್ಯಕ್ರಮಕ್ಕೆ ಆಗಮಿಸಿದ ಎಲ್ಲಾ ಭಕ್ತಾದಿಗಳಿಗೆ ಮಹಾಪೂಜೆಯ ಬಳಿಕ ಶ್ರೀ ಮಹಾಮ್ಮಾಯ ಅಮ್ಮನವರ ಗಂಧ ಪ್ರಸಾದ ವಿತರಣೆ ಹಾಗೂ ತದನಂತರ ಮಧ್ಯಾಹ್ನ ಅನ್ನ ಸಂತರ್ಪಣೆಯ ಕಾರ್ಯಕ್ರಮವು ಭಾರಿ ವಿಜೃಂಭಣೆಯಿಂದ ಜರಗಿತು ಎಂದು ಶ್ರೀದೇವಳದ ಅನುವಂಶಿಕ ಆಡಳಿತ ಮೊಕ್ತೆಸರರಾದ ರಾಕೇಶ ಪ್ರಭು ಬರಿಮಾರು ಇವರು ತಿಳಿಸಿದರು.
- Advertisement -