ಮಂಗಳೂರು:ಕುಡುಪಿನಲ್ಲಿ ಕೊಲೆಯಾದ ಸ್ಥಿತಿಯಲ್ಲಿ ಯುವಕನ ಮೃತದೇಹ ಪತ್ತೆ ಪ್ರಕರಣಕ್ಕೆ ಸಂಬಂಧಪಟ್ಟಂತೆ ಪೊಲೀಸರು 15 ಜನ ಆರೋಪಿಗಳನ್ನು ಬಂಧಿಸಿದ್ದಾರೆ.
ದಿನಾಂಕ 27-04-2025 ರಂದು ಸಂಜೆ ಸುಮಾರು 5:30 ಗಂಟೆಗೆ ಮಂಗಳೂರು ನಗರದ ಕುಡುಪು ಭಟ್ರ ಕಲ್ಲುರ್ಟಿ ದೈವಸ್ಥಾನದ ಸಮೀಪದಲ್ಲಿ ಅಪರಿಚಿತ ವ್ಯಕ್ತಿಯ ಮೃತದೇಹ ಪತ್ತೆಯಾದ ಬಗ್ಗೆ, ಗ್ರಾಮಾಂತರ ಪೊಲೀಸ್ ಠಾಣೆಗೆ ಮಾಹಿತಿ ಲಭಿಸಿದಂತೆ, ಸ್ಥಳೀಯ ಪೊಲೀಸರು ಮತ್ತು ಹಿರಿಯ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಬಳಿಕ ಅಪರಾಧ ಸ್ಥಳ ಪರಿಶೀಲನಾ ತಜ್ಞರು ಹಾಗೂ ಮೊಬೈಲ್ ಪೊರೆನ್ಸಿಕ್ ತಂಡಗಳನ್ನು ಸ್ಥಳಕ್ಕೆ ಕರೆಯಲಾಯಿತು. ಸ್ಥಳ ಪರಿಶೀಲನೆ ವೇಳೆ ಮೃತದೇಹದ ಮೈಮೇಲೆ ಸ್ಪಷ್ಟವಾದ ಹಾಗೂ ಗಂಭೀರ ಗಾಯಗಳು ಕಂಡುಬಾರದ ಕಾರಣ, ಅಪರಾಧ ಸ್ಥಳ ಪರಿಶೀಲನಾ ತಜ್ಞರು ಮತ್ತು ಪೊರೆನ್ಸಿಕ್ ತಂಡಗಳು ಶವ ಪರೀಕ್ಷೆ (ಪೋಸ್ಟ್ ಮಾರ್ಟರಿ) ನಡೆಸುವಂತೆ ಶಿಫಾರಸು ಮಾಡಿದರು.
ಅದರಂತೆ, ಪ್ರಾಥಮಿಕವಾಗಿ, ಅಪರಿಚಿತ ಮೃತದೇಹ ಕಂಡುಬಂದ ಬಗ್ಗೆ ಸ್ವೀಕೃತ ದೂರಿನಂತೆ ಮಂಗಳೂರು ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಅನುಮಾನಾಸ್ಪದ ಅಸ್ವಾಭಾವಿಕ ಸಾವು ಪ್ರಕರಣವನ್ನು (UDR) ದಾಖಲಿಸಲಾಗಿತ್ತು ಹಾಗೂ ಮೃತದೇಹವನ್ನು ಮರಣೋತ್ತರ ವೈದ್ಯಕೀಯ ಪರೀಕ್ಷೆಗೆ ಒಳಪಡಿಸುವ ಸಮುವಾಗಿ ಮಂಗಳೂರು ಜಿಲ್ಲಾ ವೆನ್ಲಾಕ್ ಆಸ್ಪತ್ರೆಯ ಶವಾಗಾರಕ್ಕೆ ಸ್ಥಳಾಂತರಿಸಲಾಯಿತು. ಬಳಿಕ ಮೃತನ ಗುರುತು ಪತ್ತೆ ಹಚ್ಚುವ ಸಲುವಾಗಿ, ಮೃತನ ಫೋಟೋಗಳನ್ನು ವ್ಯಾಪಕವಾಗಿ ಹಂಚಲಾಗಿತ್ತು. ಘಟನೆಯ ಸಮಯದಲ್ಲಿ ಸ್ಥಳದಲ್ಲಿದ್ದ ಸಾಕ್ಷಿದಾರರು ಮತ್ತು ಅನುಮಾನಿತ ವ್ಯಕ್ತಿಗಳನ್ನು ವಿಚಾರಣೆ ಮಾಡುವ ಮತ್ತು ಸ್ಥಳದ ಸುತ್ತಮುತ್ತಲಿನ ಸಿಸಿಟಿವಿ ದೃಶ್ಯಗಳು ಹಾಗೂ ಮೊಬೈಲ್/ಟವರ್ ಡಂಪ್ ಡೇಟಾ ಸಂಗ್ರಹಿಸಿ ವಿಶ್ಲೇಷಿಸಲು ಹಲವು ತಂಡಗಳನ್ನು ರಚಿಸಲಾಯಿತು.
ತನಿಖೆಯಲ್ಲಿ ಲಭ್ಯವಾದ ಮಾಹಿತಿ ಹಾಗೂ ಸ್ಥಳೀಯ ವ್ಯಕ್ತಿಗಳ ಭಾಗವಹಿಸುವಿಕೆಯ ಬಗ್ಗೆ ಹೆಚ್ಚುತ್ತಿರುವ ಅನುಮಾನಗಳ ಆಧಾರದಲ್ಲಿ ದಿನಾಂಕ 28-04-2025ರಂದು ಅಪರಿಚಿತ ಮೃತದೇಹದ ಶವ ಪರೀಕ್ಷೆ ನಡೆಸಲಾಯಿತು. ಮರಣೋತ್ತರ ವೈದ್ಯಕೀಯ ಪರೀಕ್ಷೆ ನಡೆಸಿದ ವೈದ್ಯರು ನೀಡಿದ ಪ್ರಾಥಮಿಕ ವರದಿ ಪ್ರಕಾರ, ಮೃತನ ಬೆನ್ನು ಭಾಗದಲ್ಲಿ ಬಹಳಷ್ಟು ಬಲವಾದ ಹೊಡೆತದ ಗಾಯಗಳ ಕಾರಣದಿಂದ ಉಂಟಾದ ರಕ್ತಸ್ರಾವ, ಶಾಕ್ ಮತ್ತು ಸೂಕ್ತ ಸಮಯದಲ್ಲಿ ಸರಿಯಾದ ಚಿಕಿತ್ಸೆ ಸಿಗದಿರುವುದರಿಂದ ಮರಣ ಸಂಭವಿಸಿರುವುದು ಕಂಡುಬಂದಿರುತ್ತದೆ.
ತನಿಖೆಯಲ್ಲಿ ತಿಳಿದುಬಂದಂತೆ, ದಿನಾಂಕ 27-04-2025 ರಂದು ಮಧ್ಯಾಹ್ನ ಸುಮಾರು 3:00 ಗಂಟೆಗೆ ಭಟ್ರ ಕಲ್ಲುರ್ಟಿ ದೈವಸ್ಥಾನದ ಬಳಿ ಮೈದಾನದಲ್ಲಿ ನಡೆಯುತ್ತಿದ್ದ ಕ್ರಿಕೆಟ್ ಪಂದ್ಯಾವಳಿಯ ಸಮಯದಲ್ಲಿ, ಸದ್ರಿ ಅಪರಿಚಿತ ವ್ಯಕ್ತಿಗೆ ಕೆಲವರು ಗುಂಪು ಸೇರಿ ಕೈಯಿಂದ ಮತ್ತು ಕಟ್ಟಿಗೆಯಿಂದ ಹೊಡೆದು, ಕಾಲಿನಿಂದ ಯದ್ಧಾತನ್ನ ತುಳಿದು ಹಲ್ಲೆ ನಡೆಸಿದ್ದು, ಈ ಸಮಯ ಕೆಲವರು ತಡೆಯಲು ಯತ್ನಿಸಿದರೂ, ಆತನ ಮೇಲೆ ನಿರಂತರ ಹಲ್ಲೆ ನಡೆಸಿದ ಕಾರಣ ಅಪರಿಚಿತ ವ್ಯಕ್ತಿಯು ಮೃತಪಟ್ಟಿರುವುದು ಕಂಡುಬಂದಿರುತ್ತದೆ.
ಈ ಸಂಬಂಧವಾಗಿ ಶ್ರೀ ದೀಪಕ್ ಕುಮಾರ್ (33), ತಂದೆ: ದಿ| ಗಣೇಶ್ ಕುಮಾರ್, ಕೇಶವ ಕಂಪೌಂಡ್, ಕುಲಶೇಖರ ಚೌಕಿ, ಕುಲಶೇಖರ, ಮಂಗಳೂರು ಎಂಬವರು, 19 ಜನರು ಮತ್ತು ಇತರರ ವಿರುದ್ಧ ನೀಡಿದ ದೂರಿನ ಆಧಾರದಲ್ಲಿ ಮಂಗಳೂರು ಗ್ರಾಮಾಂತರ ಪೊಲೀಸ್ : 37/2025, ९००: 103(2), 115(2), 189(2), 190, 191(1), 191(3), 240 ಭಾರತೀಯ ನ್ಯಾಯ ಸಂಹಿತೆ, 2023 (BNS, 2023) ಅಡಿಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿರುತ್ತದೆ.
ಪ್ರಸ್ತುತ, ಲಭ್ಯ ಮಾಹಿತಿಗಳ ಆಧಾರದಲ್ಲಿ ಸದ್ರಿ ಕೃತ್ಯದಲ್ಲಿ ಸುಮಾರು 25 ಕ್ಕೂ ಹೆಚ್ಚು ವ್ಯಕ್ತಿಗಳು ಭಾಗವಹಿಸಿರುವ ಸಂಶಯವಿದ್ದು, ಈಗಾಗಲೇ 15 ಮಂದಿ ಆರೋಪಿಗಳನ್ನು ಬಂಧಿಸಲಾಗಿದೆ, ಮತ್ತು ಪ್ರಥಮ ವರ್ತಮಾನ ವರದಿಯಲ್ಲಿ ಉಲ್ಲೇಖಿಸಲಾದ ಮತ್ತು ಕೃತ್ಯದಲ್ಲಿ ಬಾಗಿಯಾದ ಉಳಿದ ಆರೋಪಿಗಳನ್ನು ಶೀಘ್ರುದಲ್ಲಿ ಪತ್ತೆಮಾಡಿ ಬಂಧಿಸಲು ಅಗತ್ಯ ಕ್ರಮಗಳನ್ನು ಕೈಗೊಳ್ಳಲಾಗಿದೆ.
ಬಂಧಿತ ಆರೋಪಿಗಳ ವಿವರ ಇಂತಿದೆ.
1. ಸಚಿನ್ ಟಿ – ಪ್ರಾಯ: 26 ವರ್ಷ, ತಂದೆ ದಿವಂಗತ ತಾರಾನಾಥ್, ವಿಳಾಸ: 2-117, ನಡುಮನೆ ಹೌಸ್, ಕುಡುಪು ಅಂಚೆ, ತಿರುವೈಲ್ ಗ್ರಾಮ. ಮಂಗಳೂರು
2 ದೇವದಾಸ್ – ಪ್ರಾಯ 50 ವರ್ಷ, ತಂದೆ ದಿವಂಗತ ಲಿಂಗಪ್ಪ ಪೂಜಾರಿ, ವಿಳಾಸ: ಕುಡುಪು ನಡುಮನೆ, ಕುಡುಪು ಅಂಚೆ, ತಿರುವೈಲ್ ಗ್ರಾಮ. ಮಂಗಳೂರು.
3. ಮಂಜುನಾಥ್ ಪ್ರಾಯ: 32 ವರ್ಷ, ತಂದೆ: ಮಲ್ಲಿಕಾರ್ಜುನ, ವಿಳಾಸ ಮಂಗಳನಗರ, ಕುಡುಪು ಅಂಚೆ, ತಿರುವೈಲ್ ಗ್ರಾಮ, ಮಂಗಳೂರು
4. ಸಾಯಿದೀಪ್ – ಪ್ರಾಯ: 29 ವರ್ಷ: ತಂದೆ: ಹರೀಶ್, ವಿಳಾಸ: ಸಮೃದ್ಧಿ ಹೌಸ್. ಸುಬ್ರಹ್ಮಣ್ಯ ನಗರ, ಪದಮಲೆ ಅಂಚೆ, ನೀರುಮಾರುಗ, ಮಂಗಳೂರು,
5. ನಿತೇಶ್ ಕುಮಾರ್ @ ಸಂತೋಷ್ ಪ್ರಾಯ: 33 ವರ್ಷ, ತಂದೆ: ದಿವಂಗತ ವಿಶ್ವನಾಥ್: ವಿಳಾಸ ಶಿವ ನಿಲಯ, 15ನೇ ಕ್ರಾಸ್, ಮಂಗಳನಗರ ಕುಡುಪು ಅಂಚೆ, ಮಂಗಳೂರು
6. ದೀಕ್ಷಿತ್ ಕುಮಾರ್ – ಪ್ರಾಯ. 32 ವರ್ಷ, ತಂದೆ ವಿಶ್ವನಾಥ್. ವಿಳಾಸ: ನಡುಮನೆ ಹೌಸ್, ಕುಡುಪು ಕಟ್ಟೆ, ಮಂಗಳೂರು
7. ಸಂದೀಪ್ – ಪ್ರಾಯ 23 ವರ್ಷ, ತಂದೆ ಬಸವರಾಜಪ್ಪ ಹಾವೇರಿ, ವಿಳಾಸ: 13ನೇ ಅಡ್ಡ ರಸ್ತೆ, ಶಿವ ನಿಲಯ, ದೇವರಪದವು ವಾಮಂಜೂರು, ಮಂಗಳೂರು,
8. ವಿವಿಯನ್ ಆಳ್ವಾರೀಸ್ – ಪ್ರಾಯ: 41 ವರ್ಷ, ತಂದೆ: ವಿಜಯ ಆಳ್ವಾರೀಸ್ ವಿಳಾಸ 9ನೇ ಅಡ್ಡ ರಸ್ತೆ, ಪ್ರಾತಸ್ಸೆಫ್ ಕಾಲೋನಿ, ನಡುಮನೆ, ಕುಡುಪು ಅಂಚೆ, ಮಂಗಳೂರು.
9. ಶ್ರೀದತ್ತ – ಪ್ರಾಯ: 32 ವರ್ಷ, ತಂದೆ: ದಿವಂಗತ ಅನಂತ ವಿಳಾಸ: ಮಾತ್ರಛಾಯ ನಿಲಯ, ಕುಡುಪುಕಟ್ಟೆ ಕುಡುಪು ಅಂಚೆ, ಮಂಗಳೂರು.
10. ರಾಹುಲ್ – ಪ್ರಾಯ 23 ವರ್ಷ: ತಂದೆ: ರಮೇಶ್, ವಿಳಾಸ: ಗಿರಿಜಾ ಕಾಂಪೌಂಡ್, ಕದ್ರಿ ಕೈಬಟ್ಟಲು, ಬಿಜೈ ಅಂಚೆ, ಮಂಗಳೂರು
11. ಪ್ರದೀಪ್ ಕುಮಾರ್ – ಪ್ರಾಯ: 35 ವರ್ಷ, ತಂದೆ: ಮೋಹನ್ ದಾಸ್, ವಿಳಾಸ: ಚೈತ್ರ ನಿಲಯ, ಜ್ಯೋತಿ ನಗರ, ಕುಲಶೇಖರ, ಕುಡುಪು ಅಂಚೆ, ಮಂಗಳೂರು,
2/3
12. ಮನೀಷ್ ಶೆಟ್ಟಿ – ಪ್ರಾಯ: 21 ವರ್ಷ, ತಂದೆ ಸತೀಶ್ ಶೆಟ್ಟಿ, ವಿಳಾಸ, ಮಂಜುಶ್ರೀ ನಿಲಯ, ಬೌಲ್ಯ ಶಕ್ತಿನಗರ. ಪದವು ಗ್ರಾಮ, ಮಂಗಳೂರು
13. ಧನುಷ್ – ಪ್ರಾಯ 31 ವರ್ಷ; ತಂದೆ ದಿವಂಗತ ಸದಾಶಿವ, ವಿಳಾಸ: ನೆಕ್ಕರ ರಸ್ತೆ, ಕುಡುಪು ಕಟ್ಟೆ, ಕುಡುಪು ಅಂಚೆ, ಮಂಗಳೂರು
14. ದೀಕ್ಷಿತ್ – ಪ್ರಾಯ 27 ವರ್ಷ, ತಂದೆ ದೇವಪ್ಪ, ವಿಳಾಸ ಬ್ರಾಹ್ಮರಿ ನಿಲಯ, ಕುಲಶೇಖರ ಚೌಕಿ, ಕುಲಶೇಖರ, ಕುಡುಪು ಅಂಚೆ, ಮಂಗಳೂರು
15. ಕಿಶೋರ್ ಕುಮಾರ್ ಪ್ರಾಯ 37 ವರ್ಷ, ತಂದೆ. ಸುಬ್ರಹ್ಮಣ್ಯ ಆಚಾರ್, ವಿಳಾಸ ಕುಡುಪು ದೇವಸ್ಥಾನದ ಬಳಿ, ಕುಡುಪು ಅಂಚೆ, ಮಂಗಳೂರು