Monday, June 8, 2026
Homeಕರಾವಳಿಸುರತ್ಕಲ್‌: ಪೇಟೆಗೆ ಹೋಗಿ ಬರುವುದಾಗಿ ಹೇಳಿ ಹೋದ ವ್ಯಕ್ತಿ ವಾಪಸ್ ಮನೆಗೆ ಬಾರದೆ ನಾಪತ್ತೆ

ಸುರತ್ಕಲ್‌: ಪೇಟೆಗೆ ಹೋಗಿ ಬರುವುದಾಗಿ ಹೇಳಿ ಹೋದ ವ್ಯಕ್ತಿ ವಾಪಸ್ ಮನೆಗೆ ಬಾರದೆ ನಾಪತ್ತೆ

- Advertisement -
- Advertisement -

ಸುರತ್ಕಲ್‌: ಜನವರಿ 19ರಂದು ಸುರತ್ಕಲ್‌ ಪೇಟೆಗೆ ಹೋಗಿ ಬರುತ್ತೇನೆಂದು ಹೇಳಿ ತೆರಳಿದ್ದ ವ್ಯಕ್ತಿ ವಾಪಸ್ ಮನೆಗೆ ಬಾರದೆ ನಾಪತ್ತೆಯಾಗಿದ್ದಾರೆ.ನಾಪತ್ತೆಯಾದವರನ್ನು ಗಂಗಾಧರ.ಬಿ.ಶೆಟ್ಟಿಗಾರ(73) ಎಂದು ಗುರುತಿಸಲಾಗಿದೆ.

ಕಾಣೆಯಾದ ಗಂಗಾಧರ.ಬಿ.ಶೆಟ್ಟಿಗಾರ ಮಾನಸಿಕ ಖಿನ್ನತೆಯಿಂದ ಬಳಲುತ್ತಿದ್ದು, ಇವರು ಸಾಧಾರಣ ಮೈಕಟ್ಟು ಹೊಂದಿದ್ದು, ಉದ್ದ ಮುಖ, ಎತ್ತರ 168 ಅಡಿ, ಕೂದಲು ಕಪ್ಪು ಮತ್ತು ಬಿಳಿಯಾಗಿದ್ದು, ಕನ್ನಡ ಮತ್ತು ತುಳು ಬಾಷೆಯನ್ನು ಮಾತಾನಾಡ ಬಲ್ಲವರಾಗಿದ್ದಾರೆ ಎಂದು ತಿಳಿದು ಬಂದಿದೆ.

ಮನೆಯಿಂದ ಹೊರಡುವಾಗ ಕೇಸರಿ ಲುಂಗಿ, ಉದ್ದ ತೋಳಿನ ಕಪ್ಪು ಹಸಿರು ಮಿಶ್ರಿತ ಪ್ಲೇನ್ ಬಟ್ಟೆ ಧರಿಸಿದ್ದರು ಎಂದು ಪೊಲೀಸ್ ದೂರಿನಲ್ಲಿ ತಿಳಿಸಿದ್ದಾರೆ.

- Advertisement -

Latest News

error: Content is protected !!