Monday, July 7, 2025
Homeತಾಜಾ ಸುದ್ದಿವಿಪಕ್ಷ ‌ನಾಯಕ ಅಶೋಕ್ ಹಾಸನ ಜಿಲ್ಲಾ ಪ್ರವಾಸ; ಬೆಳೆ ಹಾನಿ ಮತ್ತು ಹೃದಯಾಘಾತ ಸಮಸ್ಯೆಗಳ ಕುರಿತು...

ವಿಪಕ್ಷ ‌ನಾಯಕ ಅಶೋಕ್ ಹಾಸನ ಜಿಲ್ಲಾ ಪ್ರವಾಸ; ಬೆಳೆ ಹಾನಿ ಮತ್ತು ಹೃದಯಾಘಾತ ಸಮಸ್ಯೆಗಳ ಕುರಿತು ಪರಿಶೀಲನೆ

spot_img
- Advertisement -
- Advertisement -

ಹಾಸನ: ವಿಧಾನಸಭೆ ವಿಪಕ್ಷ ನಾಯಕ ಆರ್. ಅಶೋಕ್ ಇಂದು ಹಾಸನ ಜಿಲ್ಲಾ ಪ್ರವಾಸ ಕೈಗೊಂಡಿದ್ದಾರೆ.

ವಿಪರೀತ ಮಳೆಯಿಂದಾಗಿ ಬೆಳೆ ಹಾನಿ ಮತ್ತು ಹಾಸನ ಜಿಲ್ಲೆಯಲ್ಲಿನ ಸರಣಿ ಹೃದಯಾಘಾತ ಸಮಸ್ಯೆ ಹಿನ್ನೆಲೆಯಲ್ಲಿ ‌ವಿಪಕ್ಷ ನಾಯಕ ಅಶೋಕ್ ಜಿಲ್ಲಾ ಪ್ರವಾಸ ನಡೆಸಿದ್ದಾರೆ‌.

ಆಲೂರು ಮತ್ತು ಸಕಲೇಶಪುರ ತಾಲೂಕುಗಳಿಗೆ ಭೇಟಿ ನೀಡಿರುವ ಅಶೋಕ್, ಆಲೂರು ತಾಲೂಕಿನ ಬೈರಾಪುರ ಗ್ರಾಮದಲ್ಲಿ ಮಳೆಯಿಂದ ಆಗಿರುವ ಮೆಕ್ಕೆಜೋಳ ಹಾನಿಯನ್ನು ವೀಕ್ಷಣೆ ಮಾಡಿದ್ದು, ಸಕಲೇಶಪುರ ತಾಲೂಕಿನ ಕ್ಯಾನಹಳ್ಳಿ ಮತ್ತು ಚಿನ್ನಹಳ್ಳಿ ಗ್ರಾಮಗಳಲ್ಲಿ ಕಾಫಿ ಬೆಳೆ ಹಾನಿಯಾಗಿರುವುದನ್ನೂ ವೀಕ್ಷಿಸಿದ್ದಾರೆ.

ಇಂದು ಸಂಜೆ 5 ಗಂಟೆಗೆ ಹಾಸನ ಜಿಲ್ಲಾಸ್ಪತ್ರೆಗೆ ಭೇಟಿ ನೀಡಲಿರುವ ಅಶೋಕ್, ಹೃದಯಾಘಾತ ಪ್ರಕರಣಗಳ ಹಿನ್ನೆಲೆಯಲ್ಲಿ ಜಿಲ್ಲಾಸ್ಪತ್ರೆಯಲ್ಲಿ ವೈದ್ಯರುಗಳ ಜೊತೆ ಸಭೆ ನಡೆಸಲಿದ್ದಾರೆ.

- Advertisement -
spot_img

Latest News

error: Content is protected !!