- Advertisement -
- Advertisement -
ಮಂಗಳೂರು: ಹೆದ್ದಾರಿಯಲ್ಲಿನ ಗುಂಡಿ ನೋಡಿ ಬೇಸತ್ತ ವ್ಯಕ್ತಿಯೊಬ್ಬರು ಕಾರಿನಲ್ಲಿ ಮಣ್ಣು ತಂದು ಗುಂಡಿ ಮುಚ್ಚೋ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.
ಮಂಗಳೂರಿನ ನಂತೂರು ಸರ್ಕಲ್ನಲ್ಲಿ ದೊಡ್ಡದಾದ ಹೊಂಡ ನಿರ್ಮಾಣವಾಗಿತ್ತು. ಈ ಗುಂಡಿಗೆ ಬುಧವಾರ ರಾತ್ರಿ ಪಾಂಡುರಂಗ ಕಾಮತ್ ಎಂಬುವವರು ಕಾರಿನಲ್ಲಿ ಗೋಣಿಯಲ್ಲಿ ಮಣ್ಣು ತಂದು ಮುಚ್ಚಿದ್ದಾರೆ. ಇದರ ವಿಡಿಯೋ ವೈರಲ್ ಆಗಿದೆ.
ತಮ್ಮ ಸ್ವಂತ ಅಂಗಡಿ ಹೊಂದಿರುವ ಇವರು ಪ್ರತಿದಿನ ಈ ರಸ್ತೆಯಲ್ಲಿ ದಿನಕ್ಕೆ ಐದಾರು ಸಲ ಬೈಕ್ ನಲ್ಲಿ ಓಡಾಡುತ್ತಾರಂತೆ. ಆದರೆ ರಸ್ತೆಯಲ್ಲಿ ಹೊಂಡ ಇರೋದರಿಂದ ಬೈಕ್ ಓಡಿಸೋದು ಕಷ್ಟವಾಗಿತ್ತಿತ್ತು. ಅದಕ್ಕಾಗಿ ಈ ಹೊಂಡ ಮುಚ್ಚಲು ಮಣ್ಣು ತಂದು ಸುರಿದಿದ್ದೇನೆ ಎಂದು ಪಾಂಡುರಂಗ ಕಾಮತ್ ಹೇಳಿದ್ದಾರೆ.
- Advertisement -