Saturday, June 28, 2025
Homeಕರಾವಳಿದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಎನ್.ಐ.ಎ ದಾಳಿ ಪ್ರಕರಣ: ಎನ್.ಐ.ಎ ದಾಳಿಯ ಸಂಪೂರ್ಣ ಮಾಹಿತಿ ಮಹಾ ಎಕ್ಸ್‌ಪ್ರೆಸ್...

ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಎನ್.ಐ.ಎ ದಾಳಿ ಪ್ರಕರಣ: ಎನ್.ಐ.ಎ ದಾಳಿಯ ಸಂಪೂರ್ಣ ಮಾಹಿತಿ ಮಹಾ ಎಕ್ಸ್‌ಪ್ರೆಸ್ ಗೆ ಲಭ್ಯ

spot_img
- Advertisement -
- Advertisement -

ಮಂಗಳೂರು : ಬೆಳ್ಳಾರೆ ಪ್ರವೀಣ್ ನೆಟ್ಟಾರು ಹತ್ಯೆ ಪ್ರಕರಣ ಸಂಬಂಧಿಸಿದಂತೆ ಇಂದು ಬೆಳ್ಳಂಬೆಳಗ್ಗೆ 33 ಕಡೆಗಳಲ್ಲಿ ರಾಷ್ಟ್ರೀಯ ತನಿಖಾ ದಳ(NIA) ದಾಳಿ ಮಾಡಿದೆ. ಇದರ ಸಂಪೂರ್ಣ ಮಾಹಿತಿ ಮಹಾ ಎಕ್ಸ್‌ಪ್ರೆಸ್ ಗೆ ಲಭ್ಯವಾಗಿದೆ.

ಪುತ್ತೂರು, ಸುಳ್ಯ, ಉಪ್ಪಿನಂಗಡಿ, ಮಡಿಕೇರಿ ಸೇರಿದಂತೆ  ಒಟ್ಟು 33 ಕಡೆಗಳಲ್ಲಿ ದಕ್ಷಿಣ ಕನ್ನಡ ಜಿಲ್ಲಾ ಪೊಲೀಸರ ಸಹಕಾರದಲ್ಲಿ ರಾಷ್ಟ್ರೀಯ ತನಿಖಾ ದಳ(NIA) ದಾಳಿ ಮಾಡಿದೆ. ದಾಳಿ ವೇಳೆ ಹಲವು ವಸ್ತುಗಳನ್ನು ಅಧಿಕಾರಿಗಳು ತನಿಖೆಗಾಗಿ ವಶಕ್ಕೆ ಪಡೆದುಕೊಂಡಿದ್ದಾರೆ ಎನ್ನಲಾಗಿದೆ.

ಬೆಂಗಳೂರು ಎನ್.ಐ.ಎ ವಿಶೇಷ ಕೋರ್ಟ್ ನಿಂದ ಸರ್ಚ್ ವಾರೆಂಟ್ ಪಡೆದು ರಾಷ್ಟ್ರೀಯ ತನಿಖಾ ದಳ ಸಂಸ್ಥೆಯ(NIA) ದೇಶದ ವಿವಿಧ ವಿಭಾಗದ ಸುಮಾರು 40 ಜನ ಅಧಿಕಾರಿಗಳು ಸುಮಾರು 55 ಕ್ಕೂ ಹೆಚ್ಚು ಖಾಸಗಿ ಇನೋವಾ ಕಾರು ಹಾಗೂ ಸರಕಾರಿ ವಾಹನದಲ್ಲಿ ದಕ್ಷಿಣ ಕನ್ನಡ ಜಿಲ್ಲೆಯ ಪೊಲೀಸರ ಸಹಕಾರದಲ್ಲಿ ಇಂದು(ಮಂಗಳವಾರ) ಬೆಳಗ್ಗಿನ ಜಾವ 6 ಗಂಟೆಗೆ ಪ್ರವೀಣ್ ನೆಟ್ಟಾರು ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಸುಳ್ಯ, ಪುತ್ತೂರು, ಉಪ್ಪಿನಂಗಡಿ, ಮಡಿಕೇರಿ ಸೇರಿದಂತೆ ಹತ್ಯೆಯಲ್ಲಿ ಭಾಗಿಯಾದ ಹತ್ತು ಜನ ಆರೋಪಿಗಳ ಮನೆ ಮೇಲೆ, ಹತ್ಯೆ ಬಳಿಕ ಆರೋಪಿಗಳಿಗೆ ಅಶ್ರಯ ನೀಡಿದ ಸ್ಥಳಗಳು, ಕಚೇರಿಗಳು ಹಾಗೂ ಎಸ್.ಡಿ.ಪಿ.ಐ ಮುಖಂಡರು ಮತ್ತು ಕಾರ್ಯಕರ್ತರ ಮನೆಗಳ ಮೇಲೆ ದಾಳಿ ನಡೆಸಿದ್ದಾರೆ‌.

ವಿಟ್ಲದ ಮಿತ್ತೂರಿನಲ್ಲಿರುವ ಎಸ್.ಡಿ.ಪಿ.ಐಗೆ ಸೇರಿದ ಫ್ರೀಡಂ ಕಮೂನಿಟಿ ಹಾಲ್, ಕಚೇರಿ, ಎಸ್.ಡಿ.ಪಿ.ಐ ಮುಖಂಡರುಗಳಾದ ಪುತ್ತೂರು ಎಪಿಎಂಸಿ ರಸ್ತೆಯ ಸಾದಿಕ್ ಸಾಲ್ಮರ, ಬೆಳ್ಳಾರೆಯ ಇಕ್ಬಾಲ್ ಬೆಳ್ಳಾರೆ, ಕುಂಬ್ರದ ಜಾವೇದ್ ಆರಿಯಡ್ಕ, ಉಪ್ಪಿನಂಗಡಿಯ ಮಸೂದ್ ಅಗ್ನಾಡಿ ಸೇರಿದಂತೆ ಕೊಲೆ ಆರೋಪಿಗಳಿಗೆ ಆಶ್ರಯ ನೀಡಿದ ಮಡಿಕೇರಿಯ ತುಫೇಲ್ ನಿವಾಸ ಮತ್ತು ಮತ್ತೊಂದು ಮನೆ, ಎಸ್.ಡಿ.ಪಿ.ಐ ಕಾರ್ಯಕರ್ತರ ನಿವಾಸಗಳು ಸೇರಿದಂತೆ ಒಟ್ಟು 33 ಕಡೆಗಳಲ್ಲಿ ದಾಳಿ ಮಾಡಿ ಶೋಧ ನಡೆಸಿದ್ದಾರೆ‌.

ಎನ್.ಐ.ಎ ದಾಳಿಯಲ್ಲಿ ಕೆಲವೊಂದು ಕರಪತ್ರಗಳು ,ಪುಸ್ತಕಗಳು , ಲ್ಯಾಪ್ ಟ್ಯಾಪ್, ಹಾರ್ಡ್ ಡಿಸ್ಕ್ ಸೇರಿದಂತೆ ಕೆಲವೊಂದು ಗೌಪ್ಯ ಮಾಹಿತಿಗಳು ಪತ್ತೆಯಾಗಿದೆ. ಅದನ್ನು ತನಿಖೆಗಾಗಿ ವಶಪಡಿಸಿಕೊಂಡಿದ್ದಾರೆ. ಬಳಿಕ ಕೆಲವು ಶಂಕಿತ ವ್ಯಕ್ತಿಗಳನ್ನು ಪುತ್ತೂರು ನಿರೀಕ್ಷಣಾ ಮಂದಿರ(IB) ಗೆ ದಕ್ಷಿಣ ಕನ್ನಡ ಜಿಲ್ಲಾ ಪೊಲೀಸ್ ವಾಹನದಲ್ಲಿ ಕೆಲವರನ್ನು ಕರೆತಂದು ವಿಚಾರಣೆಗೆ ಒಳಪಡಿಸಿದ್ದು ನಂತರ ಎನ್.ಐ.ಎ ಅಧಿಕಾರಿಗಳು ಕರೆದಾಗ ವಿಚಾರಣೆಗೆ ಹಾಜರಾಗಬೇಕೆಂದು ನೋಟಿಸ್ ನೀಡಿ ಕಳುಹಿಸಿದ್ದಾರೆ. ಇನ್ನೂ ದಾಳಿಯ ಸಂಪೂರ್ಣ ಮಾಹಿತಿಯನ್ನು ಎನ್.ಐ.ಎ ಅಧಿಕಾರಿಗಳು ಪತ್ರಿಕಾ ಪ್ರಕಟಣೆ ಮೂಲಕ ತಿಳಿಸಲಿದ್ದಾರೆ.

ಸಂಜೆ 7:30 ಗಂಟೆಗೆ ಎಲ್ಲಾ ಕಡೆಯ ಕಾರ್ಯಚರಣೆಯನ್ನು ಮುಕ್ತಾಯಗೊಳಿಸಿ ಎನ್.ಐ.ಎ ಅಧಿಕಾರಿಗಳು ಹಾಗೂ ದಕ್ಷಿಣ ಕನ್ನಡ ಜಿಲ್ಲಾ ಪೊಲೀಸರು ವಾಪಸ್ ಹೋಗಿದ್ದಾರೆ.

- Advertisement -
spot_img

Latest News

error: Content is protected !!