- Advertisement -
- Advertisement -
ಉಜಿರೆ: ನಿನ್ನೆ ಇಲ್ಲಿನ ಬೆಳ್ತಂಗಡಿ ತಾಲೂಕಿನ ಉಜಿರೆಯ ಉದ್ಯಮಿ ಬಿಜೋಯ್ ಎಂಬವರ ಮಗ, ಬಾಲಕ ಅನುಭವ್ ಅವರ ಅಪಹರಣ ಪ್ರಕರಣ ಈಗ ಹೊಸ ತಿರುವು ಪಡೆದಿದೆ. ಸಂಜೆ 6.30ರಿಂದ 6.35ರ ವೇಳೆಯಲ್ಲಿ ಉಜಿರೆ ಜನಾರ್ಧನ ಸ್ವಾಮಿ ದೇವಸ್ಥಾನದ ರಥಬೀದಿಯ ಅಶ್ವತ್ಥ ಕಟ್ಟೆಯ ಬಳಿಯಿರುವ ಅವರ ಮನೆಯಿಂದ ಇಂಡಿಕಾ ಕಾರಿನಲ್ಲಿ ಬಾಲಕನನ್ನು ಅಪಹರಿಸಿದ್ದರು. ಬಾಲಕನ ಅಜ್ಜ ಎ ಕೆ ಶಿವನ್ ಅವರು ನೋಡನೋಡುತ್ತಿದ್ದಂತೆ ಈ ಘಟನೆ ನಡೆದಿದೆ.
ಅಪಹರಣದ ನಂತರ ಬಿಜೋಯ್ ಅವರ ಮಡದಿಗೆ ಅಪಹರಣಕಾರರು ಕರೆ ಮಾಡಿ ನೂರು ಬಿಟ್ ಕಾಯಿನ್ ಕೇಳಿದ್ದರು. ಈಗ ಘಟನೆಗೆ ಮತ್ತೆ ತಿರುವು ದೊರೆತಿದ್ದು ಹಿಂದೆ 17 ಕೋಟಿ ಬೇಡಿಕೆ ಇಟ್ಟಿದ್ದ ಅಪಹರಣಕಾರರು ಈಗ 10 ಕೋಟಿಗೆ ಬೇಡಿಕೆಯನ್ನು ಇಳಿಸಿದ್ದಾರೆ ಎಂದು ಮಾಹಿತಿ ಹೊರಹಾಕಿದ್ದಾರೆ.
- Advertisement -