Monday, June 30, 2025
Homeಕರಾವಳಿಮುಲ್ಕಿ: ವ್ಯಕ್ತಿಯ ಮುಖವನ್ನು ಕಲ್ಲಿನಿಂದ ಜಜ್ಜಿ ಬರ್ಬರವಾಗಿ ಹತ್ಯೆ..!

ಮುಲ್ಕಿ: ವ್ಯಕ್ತಿಯ ಮುಖವನ್ನು ಕಲ್ಲಿನಿಂದ ಜಜ್ಜಿ ಬರ್ಬರವಾಗಿ ಹತ್ಯೆ..!

spot_img
- Advertisement -
- Advertisement -

ಮುಲ್ಕಿ : ಮುಲ್ಕಿಯ ಬಸ್ ನಿಲ್ದಾಣದ ಪೆಟ್ರೋಲ್ ಬಂಕ್ ಬಳಿ
ವ್ಯಕ್ತಿಯ ಮುಖವನ್ನು ಕಲ್ಲಿನಿಂದ ಜಜ್ಜಿ ಬರ್ಬರವಾಗಿ ಕೊಲೆ ಮಾಡಲಾಗಿದೆ.

ಕಾರ್ಕಳ ತಾಲೂಕಿನ ಮುಂಡೂರು ನಿವಾಸಿ ಹರೀಶ್ ಸಾಲ್ಯಾನ್ ( 45 ) ಕೊಲೆಯಾದ ವ್ಯಕ್ತಿ ಎಂದು ಗುರುತಿಸಲಾಗಿದೆ . ಮೃತದೇಹ ಪತ್ತೆಯಾದ ಸ್ವಲ್ಪ ದೂರದಲ್ಲಿ ರಕ್ತದ ಕಲೆ ಇರುವ ಕಲ್ಲು ಸಿಕ್ಕಿದ್ದು ಮೃತರ ಮೊಬೈಲ್ ಕೂಡ ಪತ್ತೆಯಾಗಿದೆ.

ಬಪ್ಪನಾಡು ದೇವಸ್ಥಾನಕ್ಕೆ ಪೂಜೆ ಸಲ್ಲಿಸಿದ ರಸೀದಿ ಮತ್ತು ಪ್ರಸಾದ ಅಲ್ಲೇ ಬಿದ್ದಿದ್ದ ಬ್ಯಾಗ್ ನಲ್ಲಿ ಪತ್ತೆಯಾಗಿದೆ . ಇಂದು ಬೆಳಗ್ಗೆ ಬಸ್ ನಿಲ್ದಾಣಕ್ಕೆ ಬಂದ ಪ್ರಯಾಣಿಕರು ಮೃತದೇಹ ನೋಡಿ ಮುಲ್ಕಿ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಎಸಿಪಿ ಮಹೇಶ್ ಕುಮಾರ್ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

- Advertisement -
spot_img

Latest News

error: Content is protected !!