Saturday, May 25, 2024
Homeಅಪರಾಧಮಂಗಳೂರು: ಮೊಬೈಲ್ ಕಳವು ಪ್ರಕರಣ- ಮತ್ತೊಬ್ಬ ಆರೋಪಿ ಅರೆಸ್ಟ್

ಮಂಗಳೂರು: ಮೊಬೈಲ್ ಕಳವು ಪ್ರಕರಣ- ಮತ್ತೊಬ್ಬ ಆರೋಪಿ ಅರೆಸ್ಟ್

spot_img
- Advertisement -
- Advertisement -

ಮಂಗಳೂರು: ಮೊಬೈಲ್‌ ಕಳವುಗೈದು ಪರಾರಿಯಾಗುತ್ತಿದ್ದ ವೇಳೆ ಪೊಲೀಸರು ಆತನನ್ನು ಬೆನ್ನಟ್ಟಿ ಹಿಡಿದ ಘಟನೆಗೆ ಸಂಬಂಧಿಸಿದಂತೆ ಪೊಲೀಸರು ಮತ್ತೋರ್ವ ಆರೋಪಿಯನ್ನು ಬಂಧಿಸಿದ್ದಾರೆ. ಬಂಧಿತ ಆರೋಪಿಯನ್ನು ಶಮಂತ್‌ (20) ಎಂದು ಗುರುತಿಸಲಾಗಿದೆ.

ವಿಚಾರಣೆ ನಡೆಸಿದ ಸಂದರ್ಭ ತಂಡದಲ್ಲಿ 4-5 ಮಂದಿ ಕಾರ್ಯ ನಿರ್ವಹಿಸುತ್ತಿರುವುದಾಗಿ ತಿಳಿದುಬಂದಿದೆ. ನೆಹರೂ ಮೈದಾನಲ್ಲಿ ಮಲಗಿದ್ದ ವ್ಯಕ್ತಿಯ ಮೊಬೈಲ್‌ ಕದ್ದು ಪರಾರಿಗೆ ಯತ್ನಿಸುತ್ತಿದ್ದ ನೀರುಮಾರ್ಗದ ಹರೀಶ್‌ ಪೂಜಾರಿ (32) ಎಂಬಾತನನ್ನು ಬೆನ್ನಟ್ಟಿದ್ದು ಆತನನ್ನು ವಶಕ್ಕೆ ಪಡೆದಿದ್ದರು, ಈ ವೇಳೆ ಮತ್ತೋರ್ವ ಆರೋಪಿ ರಾಜೇಶ್‌‌ ಪರಾರಿಯಾಗಿದ್ದಾನೆ.

ಕಳ್ಳರನ್ನು ಯಶಸ್ವಿಯಾಗಿ ಹಿಡಿದ ಪೊಲೀಸ್‌ ಅಧಿಕಾರಿ ವರುಣ್‌ ಆಳ್ವ ಅವರನ್ನು ಪುರಸ್ಕರಿಸಿ ಸನ್ಮಾನಿಸುತ್ತೇವೆ ಎಂದು ಆಯುಕ್ತರು ತಿಳಿಸಿದ್ದಾರೆ.

- Advertisement -
spot_img

Latest News

error: Content is protected !!