- Advertisement -
- Advertisement -
ಕಡಬ: ಹಿಂದೂ ಸ್ವಾಮೀಜಿ ಮುಖಕ್ಕೆ ಅಣ್ಣಾಮಲೈ ಫೋಟೋ ಎಡಿಟ್ ಮಾಡಿ ವಾಟ್ಸಾಪ್ ಸ್ಟೇಟಸ್ ಹಾಕಿದ ವ್ಯಕ್ತಿಯೊಬ್ಬರು ಕೊನೆಗೆ ದೇವಸ್ಥಾನಕ್ಕೆ ಬಂದು ಕ್ಷಮೆಯಾಚಿಸಿದ ಘಟನೆ ಕಡಬದಲ್ಲಿ ನಡೆದಿದೆ.
ಕಡಬದ ಅನ್ವರ್ ಎಂಬ ವ್ಯಕ್ತಿ ಹಿಂದೂ ಸ್ವಾಮೀಜಿ ಮುಖಕ್ಕೆ ಅಣ್ಣಾಮಲೈ ಫೋಟೋ ಎಡಿಟ್ ಮಾಡಿ ವಾಟ್ಸಾಪ್ ಸ್ಟೇಟಸ್ ಹಾಕಿದ್ದರು. ಇದರಿಂದ ಹಿಂದೂ ಸಂಘಟನೆಗಳು ಅನ್ವರ್ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದರು.
ಆಕ್ರೋಶಕ್ಕೆ ಮಣಿದ ಅನ್ವರ್ ಕಡಬದ ದುರ್ಗಾಂಬಿಕಾ ದೇವಸ್ಥಾನಕ್ಕೆ ಬಂದು ಹಿಂದೂ ಮುಖಂಡರ ಸಮ್ಮುಖದಲ್ಲಿ ಹಿಂದೂ ಸಮಾಜದ ಕ್ಷಮೆಯಾಚಿಸಿಗ ಬಳಿಕ ಪ್ರಕರಣ ಸುಖಾಂತ್ಯವಾಗಿದೆ.
- Advertisement -