Friday, June 27, 2025
Homeಕರಾವಳಿಮಂಗಳೂರುಕಡಬ: ಮನೆಯಿಂದ ನಾಪತ್ತೆಯಾಗಿದ್ದ ವ್ಯಕ್ತಿ ಕೆರೆಯಲ್ಲಿ ಶವವಾಗಿ ಪತ್ತೆ

ಕಡಬ: ಮನೆಯಿಂದ ನಾಪತ್ತೆಯಾಗಿದ್ದ ವ್ಯಕ್ತಿ ಕೆರೆಯಲ್ಲಿ ಶವವಾಗಿ ಪತ್ತೆ

spot_img
- Advertisement -
- Advertisement -

ಕಡಬ: ಮನೆಯಿಂದ ನಾಪತ್ತೆಯಾಗಿದ್ದ ವ್ಯಕ್ತಿ ಕೆರೆಯಲ್ಲಿ ಶವವಾಗಿ ಪತ್ತೆಯಾಗಿರುವ ಘಟನೆ ಕಡಬದ ಬೆಳಂದೂರು ಗ್ರಾಮದಲ್ಲಿ ನಡೆದಿದೆ. ಕಡಬ ತಾಲೂಕು ಬೆಳಂದೂರು ಗ್ರಾಮದ ಬೊಟ್ಟತ್ತಾರು ಮನೆಯ  ವಸಂತ ಪಿ. (36) ಮೃತ ದುರ್ದೈವಿ.

ವಸಂತ ಅವರು ಕಳೆದ ಒಂದು ವರ್ಷದಿಂದ ಯಾವುದೋ ಮಾನಸಿಕ ಖಿನ್ನತೆಗೆ ಒಳಗಾಗಿದ್ದರು ಎನ್ನಲಾಗಿದೆ. ಕಳೆದ 3 ದಿನಗಳಿಂದ ಅವರ ಮಾನಸಿಕ ಸ್ಥಿತಿ ತೀರಾ ಹದಗೆಟ್ಟಿತ್ತು ಎನ್ನಲಾಗಿದೆ.  ಇದರಿಂದಾಗಿ ಮನೆಯಲ್ಲಿ ಮತ್ತು ಮನೆಯಿಂದ ಹೊರಗಡೆ ಅಲ್ಲಲ್ಲಿ ಒಡಾಡುತ್ತಿದ್ದು, ಆ.31ರಂದು  ಒಮ್ಮಿಂದೊಮ್ಮೆಲೆ ಮನೆಯಿಂದ ಓಡಿಹೋದವರು ಮನೆಗೆ ವಾಪಾಸ್ ಬರದೇ ನಾಪತ್ತೆಯಾಗಿದ್ದರು.

ಅವರ ಸಂಬಂಧಿ  ಹುಡುಕಾಡುತ್ತಿದ್ದಾಗ ಸೆ.2ರಂದು ಸಂಶುದ್ದೀನ್ ಎಂಬವರಿಗೆ ಸೇರಿದ  ಅಡಿಕೆ ತೋಟದ ಕೆರೆ ನೀರಿನಲ್ಲಿ ಶವವಾಗಿ ಪತ್ತೆಯಾಗಿರುವುದಾಗಿ ಗೊತ್ತಾಗಿದೆ.  ವಸಂತ್ ಮಾನಸಿಕ ಖಿನ್ನತೆಗೊಳಗಾಗಿ ಕೆರೆ ನೀರಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿರುವುದಾಗಿ ಮೃತರ ಅಣ್ಣ ಶೀನಪ್ಪ ಎಂಬವರು ದೂರಿನಲ್ಲಿ ಉಲ್ಲೇಖಿಸಿದ್ದಾರೆ.

- Advertisement -
spot_img

Latest News

error: Content is protected !!