- Advertisement -
- Advertisement -
ಸುಳ್ಯ; ಕಳಂಜದ ಮಸೂದ್ ಕೊಲೆ ಪ್ರಕರಣದ ಮತ್ತೆ ಮೂವರು ಆರೋಪಿಗಳಿಗೆ ಜಾಮೀನು ಮಂಜೂರಾಗಿದೆ.ಆರೋಪಿಗಳಾದ ರಂಜಿತ್, ಸದಾಶಿವ ಹಾಗೂ ಸುಧೀರ್ ಗೆ ಹೈಕೋರ್ಟ್ ನ ನ್ಯಾಯಮೂರ್ತಿ ಜಸ್ಟೀಸ್ ವಿಶ್ವಜೀತ್ ಶೆಟ್ಟಿ ಜಾಮೀನು ಮಂಜೂರು ಮಾಡಿದ್ದಾರೆ.
ಅದರಂತೆ ಪ್ರಕರಣದ 8 ಆರೋಪಿಗಳಲ್ಲಿ 6 ಆರೋಪಿಗಳಿಗೆ ಜಾಮೀನು ದೊರೆತಂತಾಗಿದೆ. ಈಗಾಗಲೇ ಪ್ರಕರಣದ ಆರೋಪಿಗಳಾದ ಶಿವಪ್ರಸಾದ್, ಭಾಸ್ಕರ್ ಹಾಗೂ ರಂಜಿತ್ ಗೆ ಜಾಮೀನು ದೊರೆತಿದೆ.
ಆರೋಪಿಗಳ ಪರವಾಗಿ ಹಿರಿಯ ವಕೀಲರಾದ ಅರುಣ್ ಶ್ಯಾಮ್ ವಾದ ಮಂಡಿಸಿದ್ದರು. ವಕೀಲರಾದ ಸುಯೋಗ್ ಹೇರಳೆ ಹಾಗೂ ನಿಶಾಂತ್ ಕುಶಾಲಪ್ಪ ಸಹಕರಿಸಿದ್ದಾರೆ.
- Advertisement -