- Advertisement -
- Advertisement -
ಪುತ್ತೂರು; ಪುತ್ತಿಲ ಪರಿವಾರದ ಮನೀಶ್ ಕುಲಾಲ್ ಅವರಿಗೆ ತಲವಾರ್ ಪ್ರದರ್ಶಿಸಿ ಬೆದರಿಕೆ ಒಡ್ಡಿದ ಪ್ರಕರಣಕ್ಕೆ ಸಂಬಂಧಪಟ್ಟಂತೆ ತಮ್ಮ ಮಗನಿಗೆ ರಕ್ಷಣೆ ನೀಡುವಂತೆ ಮನೀಶ್ ಕುಲಾಲ್ ಹೆತ್ತವರು ಪೊಲೀಸರ ಮೊರೆ ಹೋಗಿದ್ದಾರೆ.
ತಲವಾರು ಜತೆ ಬಂದಿದ್ದ ತಂಡ ನನ್ನ ಮಗನನ್ನು ಗುರಿಯಾಗಿರಿಸಿಕೊಂಡಿದ್ದಾರೆ.ನನ್ನ ಮಗನಿಗೆ ರಕ್ಷಣೆ ನೀಡುವಂತೆ ಮನೀಶ್ ತಂದೆ ಆನಂದ ಕುಲಾಲ್ ಅವರು ಮನವಿಯಲ್ಲಿ ತಿಳಿಸಿದ್ದಾರೆ.
ಪ್ರಕರಣಕ್ಕೆ ಸಂಬಂಧಪಟ್ಟಂತೆ ಒಂಭತ್ತು ಮಂದಿಯನ್ನು ಪೊಲೀಸರು ಬಂಧಿಸಿದ್ದು ನ.11ರಂದು ಅವರನ್ನೆಲ್ಲಾ ನ್ಯಾಯಾಧೀಶರ ಮುಂದೆ ಹಾಜರುಪಡಿಸಲಾಗಿದ್ದು ನ್ಯಾಯಾಧೀಶರು ನ.16ರ ತನಕ ನ್ಯಾಯಾಂಗ ಕಸ್ಟಡಿಗೆ ನೀಡಿದ್ದಾರೆ.
- Advertisement -