- Advertisement -
- Advertisement -
ಮಂಗಳೂರು: ವೈದ್ಯಕೀಯ ಉಪಕರಣ ಸರಬರಾಜು ಮಾಡುವುದಾಗಿ ನಂಬಿಸಿ ಲಕ್ಷಾಂತರ ರೂಪಾಯಿ ವಂಚನೆ ಮಾಡಿರುವ ಘಟನೆ ಮಂಗಳೂರಿನಲ್ಲಿ ನಡೆದಿದೆ.
ವೈದ್ಯಕೀಯ ಉಪಕರಣಗಳ ಮಾರಾಟ ವ್ಯಾಪಾರ ಮಾಡುತ್ತಿರುವ ಮುರಳೀಧರ ಶೆಟ್ಟಿ ಅವರು 2020ರಲ್ಲಿ ಆರೋಪಿ ಅಮಿತ್ ಸುರೇಶ್ ಶೇವಾಲೆ ಎಂಬಾತನಿಗೆ ವೈದ್ಯಕೀಯ ಉಪಕರಣಗಳ ಸರಬರಾಜಿಗೆ ಒಪ್ಪಂದ ಮಾಡಿಕೊಂಡು 12,00,075 ಲಕ್ಷ ರೂ. ಮುರಳೀಧರ ಶೆಟ್ಟಿ ಅವರು ನೀಡಿದ್ದರು.
ಆದರೆ ಆತ ಉಪಕರಣಗಳನ್ನು ತಲುಪಿಸದೆ ವಂಚನೆ ಮಾಡಿದ್ದ. ಪುಣೆಗೆ ಹೋಗಿ ಹಲವಾರು ಬಾರಿ ಮಾತುಕತೆ ನಡೆಸಿದಾಗ ಚೆಕ್ಗಳನ್ನು ನೀಡಿದ್ದು, ಅವು ಬೌನ್ಸ್ ಆಗಿವೆ. ನಂತರ 2021ರಲ್ಲಿ ಒಪ್ಪಂದ ಮಾಡಿಕೊಂಡು ಆರೋಪಿ 15,39,075 ರೂ. ಪಾವತಿಸಿಕೊಂಡು ನಂಬಿಕೆ ದ್ರೋಹ ಮಾಡಿದ್ದಾನೆ ದೂರಿನಲ್ಲಿ ಉಲ್ಲೇಖಿಸಲಾಗಿದೆ.
- Advertisement -