ಮಂಗಳೂರು: ಎಂಗೇಜ್ ಮೆಂಟ್ ನಲ್ಲಿ ಬಿದ್ದು ಸಿಕ್ಕಿದ್ದ ಚಿನ್ನಾಭರಣವನ್ನು ವಾರಸುದಾರರಿಗೆ ಮರಳಿಸಿ ಯುವಕ ಪ್ರಾಮಾಣಿಕತೆ ಮೆರೆದ ಘಟನೆ ಕುಂಬಳೆಯಲ್ಲಿ ನಡೆದಿದೆ.
ಕುಂಬಳೆ ಸಮೀಪದ ಪುತ್ತಿಗೆಯ ಪಂಜಳ ನಿವಾಸಿ ವಿಜಯಕುಮಾರ್ ರೈ ಅವರು ಚಿನ್ನಾಭರಣ ವಾಪಾಸು ನೀಡಿದ ಯುವಕ. ಕಿರಣ್ ಶೆಟ್ಟಿ ಎಂಬವರ ಮಗುವಿನ ಚಿನ್ನಾಭರಣ ಎಂಗೇಜ್ ಮೆಂಟ್ ಒಂದರಲ್ಲಿ ಕಳೆದು ಹೋಗಿತ್ತು.ಅದನ್ನು ಹುಡುಕುತ್ತಾ ಅವರು ಎಂಗೇಜ್ ಮೆಂಟ್ ನಡೆದ ಸ್ಥಳಕ್ಕೆ ಬಂದಿದ್ದಾರೆ. ಅಲ್ಲಿ ಬಂದು ವಿಜಯ ಕುಮಾರ್ ರೈ ಅವರು ಕಿರಣ್ ಶೆಟ್ಟಿ ಅವರನ್ನು ವಿಚಾರಿಸಿದ್ದಾರೆ. ಆಗ ಚಿನ್ನ ಕಳೆದುಕೊಂಡ ಕುರಿತು ಹೇಳಿದ್ದಾರೆ, ನಂತರ ಚಿನ್ನದ ಗುರುತನ್ನು ಕೇಳಿ ಅವರಿಗೆ ಹಸ್ತಾಂತರ ಮಾಡಿದ್ದಾರೆ.
ಅನಂತರ ಕಿರಣ್ ಶೆಟ್ಟಿ ಅವರು ವಿಜಯಕುಮಾರ್ ರೈ ಅವರ ದೂರವಾಣಿ ಸಂಖ್ಯೆಯನ್ನು ಪಡೆದುಕೊಂಡು ಹೋಗಿದ್ದಾರೆ. ನಂತರ ತಾನು ಮಾರ್ಗದರ್ಶಕರಾಗಿರುವ ತಲಪಾಡಿ ಸಮೀಪದ ಕಿನ್ಯ ದುರ್ಗಾಪುರದ ಯುವಶಕ್ತಿಯ ಕಾರ್ಯಕ್ರಮದಲ್ಲಿ ವಿಜಯಕುಮಾರ್ ರೈ ಅವರನ್ನು ನಗದು ಸಹಿತ ಸನ್ಮಾನ ಮಾಡಿ ಗೌರವಿಸಿದ್ದಾರೆ.