Sunday, June 29, 2025
Homeಪ್ರಮುಖ-ಸುದ್ದಿಮಂಗಳೂರು; ಕೊನೆಗೂ ಈಡೇರಿತು ಕರಾವಳಿ ಹಾಗೂ ಬಯಲು ಸೀಮೆ ಮಂದಿಯ ಬಹುದಿನದ ಬೇಡಿಕೆ; ಇನ್ಮುಂದೆ ಖಾಯಂ...

ಮಂಗಳೂರು; ಕೊನೆಗೂ ಈಡೇರಿತು ಕರಾವಳಿ ಹಾಗೂ ಬಯಲು ಸೀಮೆ ಮಂದಿಯ ಬಹುದಿನದ ಬೇಡಿಕೆ; ಇನ್ಮುಂದೆ ಖಾಯಂ ಆಗಿ ಸಂಚರಿಸಲಿದೆ ಮಂಗಳೂರು ವಿಜಯಪುರ ವಿಶೇಷ ರೈಲು

spot_img
- Advertisement -
- Advertisement -

ಮಂಗಳೂರು ವಿಜಯಪುರ ವಿಶೇಷ ರೈಲು ಖಾಯಂ ಆಗಿ ಸಂಚರಿಸಬೇಕು ಎಂಬ ಕರಾವಳಿ ಹಾಗೂ ಬಯಲು ಸೀಮೆ ಮಂದಿಯ ಬಹುದಿನದ ಬೇಡಿಕೆ ಈಡೇರಿದೆ. ಇನ್ಮುಂದೆ ಮಂಗಳೂರು ವಿಜಯಪುರ ವಿಶೇಷ ರೈಲು ಖಾಯಂ ಆಗಿ ಸಂಚರಿಸಲಿದೆ. ಈ ಸಂತಸದ ಸುದ್ದಿಯನ್ನು ಸಂಸದ ಸಂಸದ ಕ್ಯಾಪ್ಟನ್ ಬ್ರಿಜೇಶ್ ಚೌಟ ತಮ್ಮ ಸಾಮಾಜಿಕ ಜಾಲತಾಣದಲ್ಲಿ  ಹಂಚಿಕೊಂಡಿದ್ದಾರೆ.

ಮಂಗಳೂರು ವಿಜಯಪುರ ರೈಲು, ಅತೀ ಹೆಚ್ಚು ಪ್ರಯಾಣಿಕರು ಸಂಚರಿಸುವ ರೈಲು ವಿಶೇಷ ರೈಲು ಎಂದು ತಾತ್ಕಾಲಿಕವಾಗಿ ಐದು ವರ್ಷಗಳ ಹಿಂದೆ ಪ್ರಾರಂಭಿಸಲಾಗಿತ್ತು, ವಿಶೇಷ ರೈಲು ಯಾವಾಗ ಬೇಕಾದರೂ ರೈಲ್ವೆ ಇಲಾಖೆ ರದ್ದು ಮಾಡುವ ಅವಕಾಶವಿತ್ತು. ಈ ಹಿನ್ನಲೆ ರೈಲು ಪ್ರಯಾಣಿಕರು ಈ ರೈಲನ್ನು ಖಾಯಂ ಗೊಳಿಸಬೇಕೆಂದು ಆಗ್ರಹಿಸುತ್ತಲೆ ಬಂದಿದ್ದರು. ಇದೀಗ ದಕ್ಷಿಣಕನ್ನಡ ಜಿಲ್ಲೆಯ ಸಂಸದ ಕ್ಯಾಪ್ಟನ್ ಬ್ರಿಜೇಶ್ ಚೌಟ ಹಾಗೂ ರಾಜ್ಯ ರೈಲ್ವೆ ಸಚಿವ ವಿ ಸೋಮಣ್ಣ ಅವರ ಮುತುವರ್ಜಿಯಿಂದ ಈ ರೈಲು ಖಾಯಂ ಆಗಿದೆ. ಇನ್ನು ಈ ರೈಲು ವಿಜಯಪುರದಿಂದ ಮಂಗಳೂರು ಸೆಂಟ್ರಲ್‌ಗೆ ಚಲಿಸುವ ರೈಲು ಸಂಖ್ಯೆ 17377, ಮಧ್ಯಾಹ್ನ 3:00 ಗಂಟೆಗೆ ವಿಜಯಪುರದಿಂದ ಹೊರಟು ಬೆಳಿಗ್ಗೆ 9:50 ಕ್ಕೆ ಮಂಗಳೂರು ಸೆಂಟ್ರಲ್‌ಗೆ ಆಗಮಿಸುತ್ತದೆ. ಹಿಂದಿರುಗುವ ದಿಕ್ಕಿನಲ್ಲಿ, ರೈಲು ಸಂಖ್ಯೆ 17378 ಮಂಗಳೂರು ಸೆಂಟ್ರಲ್‌ನಿಂದ ಸಂಜೆ 4:45 ಕ್ಕೆ ಹೊರಟು ಬೆಳಿಗ್ಗೆ 11:15 ಕ್ಕೆ ವಿಜಯಪುರ ತಲುಪುತ್ತದೆ.

ಈ ರೈಲು ಎರಡೂ ನಗರಗಳ ನಡುವೆ ಪ್ರಯಾಣಿಸುವ ಪ್ರಯಾಣಿಕರಿಗೆ ಭಾರೀ ಅನುಕೂಲವಾಗುತ್ತದೆ ಎಂದು ಸಂಸದ ಕ್ಯಾಪ್ಟನ್ ಬ್ರಿಜೇಶ್ ಚೌಟ ತಮ್ಮ ಟ್ವೀಟ್‌ನಲ್ಲಿ ತಿಳಿಸಿದ್ದಾರೆ. ಈ ಕ್ರಮವು ಮಂಗಳೂರಿನಲ್ಲಿ ವೈದ್ಯಕೀಯ ಚಿಕಿತ್ಸೆ ಪಡೆಯುವ ಉತ್ತರ ಕರ್ನಾಟಕದ ರೋಗಿಗಳು, ಕರಾವಳಿ ಜಿಲ್ಲೆಗಳಲ್ಲಿ ಶಿಕ್ಷಣ ಪಡೆಯುತ್ತಿರುವ ವಿದ್ಯಾರ್ಥಿಗಳು ಮತ್ತು ನಿಯಮಿತ ಪ್ರಯಾಣಿಕರಿಗೆ ಇದು ಬಹಲ ಪ್ರಯೋಜನಕಾರಿ ಎಂದಿದ್ದಾರೆ. ಇದನ್ನು ಸಾಧ್ಯವಾಗಿಸುವಲ್ಲಿ ಬೆಂಬಲ ನೀಡಿದ ಕೇಂದ್ರ ರೈಲ್ವೆ ಸಚಿವೆ ಅಶ್ವಿನಿ ವೈಷ್ಣವ್ ಮತ್ತು ರಾಜ್ಯ ಸಚಿವ ವಿ. ಸೋಮಣ್ಣ ಅವರಿಗೆ ಕ್ಯಾಪ್ಟನ್ ಬ್ರಿಜೇಶ್ ಚೌಟ ಕೃತಜ್ಞತೆ ಸಲ್ಲಿಸಿದ್ದಾರೆ.

- Advertisement -
spot_img

Latest News

error: Content is protected !!