- Advertisement -
- Advertisement -
ಉಪ್ಪಿನಂಗಡಿ: ಮೂತ್ರ ವಿಸರ್ಜನೆಗೆಂದು ಬಸ್ ನಿಂದ ಇಳಿದ ವ್ಯಕ್ತಿ ನಾಪತ್ತೆಯಾಗಿರುವ ಘಟನೆ ಶಿರಾಡಿ ಘಾಟ್ ನಲ್ಲಿ ನಡೆದಿದೆ.
ಮೇ 14ರ ತಡರಾತ್ರಿ ಬೆಂಗಳೂರಿನಿಂದ ಮಂಗಳೂರಿಗೆ ಬರುತ್ತಿದ್ದ ಬಸ್ಸಿನಲ್ಲಿ ಮಧ್ಯಪ್ರದೇಶ ಮೂಲದ ಶ್ರೀಪಾಲ್ ನರ್ರೆ (37) ಎಂಬ ವ್ಯಕ್ತಿ ಪ್ರಯಾಣಿಸುತ್ತಿದ್ದರು. ಬಸ್ ಶಿರಾಡಿ ಘಾಟಿ ತಲುಪುತ್ತಿದ್ದಂತೆ ತನಗೆ ಬಸ್ಸಿನಿಂದ ಇಳಿಯಬೇಕೆಂದು ವಿನಂತಿಸಿದ್ದು, ಮೂತ್ರ ವಿಸರ್ಜನೆಯ ಕಾರಣ ಇರಬೇಕೆಂದು ಭಾವಿಸಿದ ನಿರ್ವಾಹಕ ಬಸ್ಸನ್ನು ನಿಲ್ಲಿಸಿದ್ದಾರೆ. ನಂತರ ಕೆಳಗೆ ಇಳಿದವನೇ ಹೆದ್ದಾರಿಯಲ್ಲಿ ಓಡಿ ಹೋಗಿದ್ದಾರೆಂದು ಹೇಳಲಾಗಿದೆ. ಈ ವೇಳೆ ಮರಳದೇ ಇದ್ದಾಗ ಬಸ್ಸನ್ನು ಚಲಾಯಿಸಿಕೊಂಡು ಬಂದು ಉಪ್ಪಿನಂಗಡಿ ಪೊಲೀಸ್ ಠಾಣೆಗೆ ಮಾಹಿತಿ ನೀಡಿದ್ದಾರೆ. ಪೊಲೀಸರು ಆ ವ್ಯಕ್ತಿಯ ಆಧಾರ್ ಕಾರ್ಡ್ ಮತ್ತಿತರ ಮಾಹಿತಿ ಸಂಗ್ರಹಿಸಿ ಬಳಿಕ ಬಸ್ ನ್ನು ಕಳುಹಿಸಿದ್ದಾರೆ. ಆದರೆ ನಾಪತ್ತೆಯಾದ ವ್ಯಕ್ತಿಯ ಸುಳಿವು ಮಾತ್ರ ಪತ್ತೆಯಾಗಿಲ್ಲ. ಪೊಲೀಸರು ತನಿಖೆ ನಡೆಸುತ್ತಿದ್ದಾರೆ.
- Advertisement -