Tuesday, July 2, 2024
Homeಕರಾವಳಿಪುತ್ತೂರು; KSRTC ಬಸ್ ನಲ್ಲಿ‌ ಪ್ರಯಾಣಿಸುವಾಗಲೇ ಹೃದಯಾಘಾತವಾಗಿ ವ್ಯಕ್ತಿ‌ ಸಾವು

ಪುತ್ತೂರು; KSRTC ಬಸ್ ನಲ್ಲಿ‌ ಪ್ರಯಾಣಿಸುವಾಗಲೇ ಹೃದಯಾಘಾತವಾಗಿ ವ್ಯಕ್ತಿ‌ ಸಾವು

spot_img
- Advertisement -
- Advertisement -

ಪುತ್ತೂರು; KSRTC ಬಸ್ ನಲ್ಲಿ‌ ಪ್ರಯಾಣಿಸುವಾಗಲೇ
ಹೃದಯಾಘಾತವಾಗಿ ವ್ಯಕ್ತಿ ಸಾವನ್ನಪ್ಪಿರುವ ಘಟನೆ ಪುತ್ತೂರಿನಲ್ಲಿ ನಡೆದಿದೆ.

ಜೂನ್ 28 ರಂದು ರಾತ್ರಿ ಮಂಗಳೂರಿನಿಂದ ಮೈಸೂರಿಗೆ ತೆರಳುತ್ತಿದ್ದ KSRTC  ಬಸ್‌ನಲ್ಲಿದ್ದ  ಮೈಸೂರು ಮೂಲದ ಪ್ರಯಾಣಿಕರೊಬ್ಬರು  ಪುತ್ತೂರು ತಲುಪುತ್ತಿದ್ದಂತೆ ಪ್ರಜ್ಞಾಹೀನವಾಗಿದ್ದಾರೆ. ಕೂಡಲೇ ಕೆಎಸ್ಸಾರ್ಟಿಸಿ ಸಿಬ್ಬಂದಿ ಮತ್ತು ಸಹ ಪ್ರಯಾಣಿಕರು ಪುತ್ತೂರು ಸರಕಾರಿ ಆಸ್ಪತ್ರೆಗೆ ಕರೆದೊಯ್ದರೂ ಅದಾಗಲೇ ಮೃತಪಟ್ಟಿದ್ದರು.

ಮೈಸೂರು ಹಂಚ್ಯಾ ಅಂಚೆ ವ್ಯಾಪ್ತಿಯ ಮಾನಸಿ ನಗರ ನಿವಾಸಿ ಮಂಜುನಾಥ (57) ಮೃತ ದುರ್ದೈವಿ.

ಕೆಲವು ವರ್ಷಗಳಿಂದ ಹೃದಯ ಸಂಬಂಧಿ ಕಾಯಿಲೆಯಿಂದ ಬಳಲುತ್ತಿದ್ದ ಅವರು ಕೆಲವು ದಿನಗಳ ಹಿಂದೆ ಮೈಸೂರಿನ ಜಯದೇವ ಹೃದ್ರೋಗ ಆಸ್ಪತ್ರೆಗೆ  2 ದಿನ ದಾಖಲಾಗಿ ಚೇತರಿಸಿಕೊಂಡಿದ್ದರು ಎನ್ನಲಾಗಿದೆ.

ಮೃತರ ಪತ್ನಿ ನೀಡಿದ ದೂರಿನಂತೆ ಪುತ್ತೂರು ನಗರ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

- Advertisement -
spot_img

Latest News

error: Content is protected !!