Thursday, June 25, 2026
Homeಕರಾವಳಿರಬ್ಬರ್ ಟ್ಯಾಪಿಂಗ್ ಮಾಡುವಾಗ ವ್ಯಕ್ತಿಯ ಮೇಲೆ ಹೆಜ್ಜೆನು ದಾಳಿ

ರಬ್ಬರ್ ಟ್ಯಾಪಿಂಗ್ ಮಾಡುವಾಗ ವ್ಯಕ್ತಿಯ ಮೇಲೆ ಹೆಜ್ಜೆನು ದಾಳಿ

- Advertisement -
- Advertisement -

ಬೆಳ್ತಂಗಡಿ : ಬೆಳಗ್ಗೆ ರಬ್ಬರ್ ತೋಟದಲ್ಲಿ ಟ್ಯಾಪಿಂಗ್ ಮಾಡುವ ವೇಳೆ ವ್ಯಕ್ತಿಯ ಮೇಲೆ ಹೆಜ್ಜೆನು ದಾಳಿ ಮಾಡಿದ್ದು‌ ಗಾಯಗೊಂಡ ವ್ಯಕ್ತಿ ಬೆಳ್ತಂಗಡಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಬೆಳ್ತಂಗಡಿ ತಾಲೂಕಿನ ಕೊಯ್ಯೂರು ಗ್ರಾಮದ ಪೆರಿಯಡ್ಕ ಶಾಲೆಯ ಹಿಂಭಾಗದಲ್ಲಿರುವ ರಬ್ಬರ್ ತೋಟದಲ್ಲಿ ಕೇರಳ ರಾಜ್ಯದ ಕೊಲ್ಲಂ ನಿವಾಸಿ ಅನಿಲ್ ಕುಮಾರ್(53) ಎಂಬವರು ರಬ್ಬರ್ ಟ್ಯಾಪಿಂಗ್ ಮಾಡುವಾಗ ಏಕಾಏಕಿ ಹೆಜ್ಜೆನು ದಾಳಿ ಮಾಡಿದೆ. ತಲೆ ಮುಖದ ಭಾಗಕ್ಕೆ ಹೆಜ್ಜೆನು ಕಚ್ಚಿದ್ದು ತಕ್ಷಣ ಅಲ್ಲಿಂದ ಓಡಿಹೋಗಿದ್ದು‌. ನಂತರ ಹೆಚ್ಚಿನ ಚಿಕಿತ್ಸೆಗಾಗಿ ಬೆಳ್ತಂಗಡಿ ಸರಕಾರಿ ಆಸ್ಪತ್ರೆಯಲ್ಲಿ ದಾಖಲಾಗಿದ್ದು.‌ಈ ಬಗ್ಗೆ ಬೆಳ್ತಂಗಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

- Advertisement -

Latest News

error: Content is protected !!