Tuesday, July 2, 2024
Homeಕರಾವಳಿಪದ್ಮಶ್ರೀ ಮಹಾಲಿಂಗ ನಾಯ್ಕ ಅವರ ಕುರಿತು ಲೇಖಕ ನರೇಂದ್ರ ರೈ ಬರೆದ ಲೇಖನ ತುಮಕೂರು ವಿವಿ...

ಪದ್ಮಶ್ರೀ ಮಹಾಲಿಂಗ ನಾಯ್ಕ ಅವರ ಕುರಿತು ಲೇಖಕ ನರೇಂದ್ರ ರೈ ಬರೆದ ಲೇಖನ ತುಮಕೂರು ವಿವಿ ಪದವಿ ತರಗತಿಗಳ ಕನ್ನಡ ಪಠ್ಯಕ್ಕೆ ಸೇರ್ಪಡೆ

spot_img
- Advertisement -
- Advertisement -

ಪುತ್ತೂರು: ಪದ್ಮಶ್ರೀ ಪುರಸ್ಕೃತ  ಅಮೈ ಮಹಾಲಿಂಗ ನಾಯ್ಕ ಅವರ ಕುರಿತು ಪುತ್ತೂರಿನ ಲೇಖಕ, ಅಂಕಣಕಾರ ಹಾಗೂ ಉಪನ್ಯಾಸಕ ಡಾ.ನರೇಂದ್ರ ರೈ ದೇರ್ಲ ಅವರು ಬರೆದ ಲೇಖನವು ತುಮಕೂರು ವಿಶ್ವ ವಿದ್ಯಾನಿಲಯದ ಪದವಿ ತರಗತಿಗಳಿಗೆ ಕನ್ನಡ ಪಠ್ಯಕ್ಕೆ ಸೇರ್ಪಡೆಗೊಂಡಿದೆ. ಈ ವಿಶ್ವ ವಿದ್ಯಾನಿಲಯದ ಪದವಿ ಪಠ್ಯದ ಆಯ್ಕೆ ಸಮಿತಿಯು ಬಿಎ, ಬಿಕಾಂ, ಬಿಎಸ್ಸಿ ಮತ್ತು ಬಿಬಿಎ ಪದವಿಯ ಎಲ್ಲಾ ವಿದ್ಯಾರ್ಥಿಗಳು ಓದುವ ಸ್ಪೂರ್ತಿಯ ಕಥನ ಮಾಲಿಕೆಯಲ್ಲಿ ಈ ಲೇಖನವನ್ನು ಸೇರಿಸಿ ಕಲಿಕೆಗೆ ಒದಗಿಸಿದೆ.

ಡಾ. ನರೇಂದ್ರ ರೈ ದೇರ್ಲ ಅವರು ಒಂದು ವರ್ಷಗಳ ಹಿಂದೆ ‘ಸುರಂಗದ ನೀರಿನಲ್ಲಿ ತೇಲಿ ಬಂತು ಪದ್ಮಶ್ರೀ’ ಎಂಬ ಲೇಖನವನ್ನು ಬರೆದಿದ್ದರು. ಈ ಲೇಖನ ತರಂಗ ವಾರಪತ್ರಿಕೆಯಲ್ಲಿ ವಿಶೇಷ ಲೇಖನವಾಗಿ ಪ್ರಕಟಗೊಂಡಿತ್ತು. ಇದೀಗ ತುಮಕೂರು ವಿಶ್ವವಿದ್ಯಾನಿಲಯವು ಈ ಲೇಖನವನ್ನು ಪದವಿ ಪಠ್ಯಕ್ಕೆ ಆಯ್ಕೆ ಮಾಡಿಕೊಂಡಿದೆ.

- Advertisement -
spot_img

Latest News

error: Content is protected !!