- Advertisement -
- Advertisement -
ಬೆಳ್ತಂಗಡಿ; ಸವಣಾಲು ಗ್ರಾಮದ ಮಂಜದಬೆಟ್ಟು ಪಿಲಿಚಾಮುಂಡಿ ಗುಡ್ಡೆ-ಸದ್ರಿ ಸ್ಥಳದಲ್ಲಿ ಪಿಲಿಚಾಮುಂಡಿ ಕೊಡಮಣಿತ್ತಾಯ ಸಾನಿಧ್ಯಗಳ ಜೀರ್ಣೋದ್ಧಾರದ ಹಿನ್ನೆಲೆಯಲ್ಲಿ ದಿನಾಂಕ. 30.05.2025 ನೇ ಶುಕ್ರವಾರ ಬೆಳಿಗ್ಗೆ ಘಂ.8:25 ರ ಮಿಥುನ ಲಗ್ನದ ಶುಭ ಮುಹೂರ್ತದಲ್ಲಿ ನೂತನ ಚಾವಡಿಯ ಶಿಲಾನ್ಯಾಸ ನೆರವೇರಿತು.
ಈ ವೇಳೆ ಸಮಿತಿಯ ಅಧ್ಯಕ್ಷ ಚಿದಾನಂದ ಶೆಟ್ಟಿ ಹೇರಾಜೆ, ಕಾರ್ಯದರ್ಶಿ ಪುರಂದರ ಪೂಜಾರಿ ಕಟ್ಟದ ಬೈಲು, ಗೌರವಾಧ್ಯಕ್ಷ ರಘುರಾಮ್ ಗಾಂಭೀರ ಬೊಲ್ಲೊಟ್ಟು ಗುತ್ತು ,ಕೋಶಾಧಿಕಾರಿ ಲೋಕನಾಥ್ ಶೆಟ್ಟಿ ಅಂಗರ್ದೋಟ್ಟು,ಲೆಕ್ಕ ಪರಿಶೋಧಕ ಮೋಹನ್ ರೈ ದೋಲೊಟ್ಟು, ಉಪಾಧ್ಯಕ್ಷ ಕೃಷ್ಣಪ್ಪ ಪೂಜಾರಿ ಸುಳ್ಯೋಡಿ ಮತ್ತು ರವಿ ಪೂಜಾರಿ ಮಂಜದಬೆಟ್ಟು, ಜೊತೆ ಕಾರ್ಯದರ್ಶಿ ರಾಜು ಬಿ ಶೆಟ್ಟಿ ಮಂಜದಬೆಟ್ಟು ಸೇರಿದಂತೆ ಗ್ರಾಮದ ಗುತ್ತು ಬರ್ಕೆಯವರು ಮತ್ತು ಗ್ರಾಮಸ್ಥರು ಉಪಸ್ಥಿತರಿದ್ದರು.
- Advertisement -