- Advertisement -
- Advertisement -
ಮಂಗಳೂರು: ವಿಮಾನ ನಿಲ್ದಾಣ ರಸ್ತೆಯ ಮರವೂರು ಸೇತುವೆ ಬಳಿ ಮೋಟಾರ್ ಬೈಕ್, ಹೆಲ್ಮೆಟ್ ಪತ್ತೆ ಪ್ರಕರಣಕ್ಕೆ ಟ್ವಿಸ್ಟ್ ಸಿಕ್ಕಿದೆ. ಪತಿ ನಾಪತ್ತೆಯಾಗಿದ್ದಾರೆಂದು ಪತ್ನಿಯೊಬ್ಬರು ದೂರು ನೀಡಿದ್ದಾರೆ.
ನನ್ನ ಪತಿ ಹಾಗೂ ನನಗೆ ಮಧ್ಯರಾತ್ರಿ ಜಗಳವಾಗಿದ್ದು, ಪತಿ ಬೈಕ್ ಸಮೇತ ಮನೆಯಿಂದ ರಾತ್ರಿ ಹೊರಗೆ ಹೋದವರು ವಾಪಾಸ್ ಬಂದಿಲ್ಲ ಎಂದು ನಾಪತ್ತೆಯಾಗಿರುವ ಮಂಗಳೂರು ಕದ್ರಿ ಠಾಣಾ ವ್ಯಾಪ್ತಿಯ ವ್ಯಾಸ ನಗರ ನಿವಾಸಿ ವಿವೇಕ್ ಪ್ರಭು (45) ಎಂಬವರ ಪತ್ನಿ ದೂರು ನೀಡಿದ್ದಾರೆ.ಇದೀಗ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ವಿವೇಕ್ ಪ್ರಭು ಅವರಿಗಾಗಿ ಹುಡುಕಾಟ ನಡೆಸುತ್ತಿದ್ದಾರೆ.
- Advertisement -