- Advertisement -
- Advertisement -
ಸುಳ್ಯ: ಮಹಿಳೆಯೊಬ್ಬರು ಸರ್ಕಾರಿ ಬಸ್ ನಲ್ಲಿ ಮರೆತು ಹೋಗಿದ್ದ ಪರ್ಸ್ ನ್ನು ಅವರಿಗೆ ಹಿಂತಿರುಗಿಸುವ ಮೂಲಕ ಕಂಡಕ್ಟರ್ ಒಬ್ಬರು ಪ್ರಾಮಾಣಿಕತೆ ಮರೆದಿದ್ದಾರೆ.
ನಡುಗಲ್ಲಿನ ಮಹಿಳೆಯೊರ್ವರು ಎ.22 ರ ಸಂಜೆ ಕಲ್ಮಕಾರಿನಲ್ಲಿ ನಿಲುಗಡೆಯಾಗಲಿರುವ ಬಸ್ ನಲ್ಲಿ ರೂ 16750 ಹಣವಿದ್ದ ಪರ್ಸ್ ನ್ನು ಬಿಟ್ಟು ಮಹಿಳೆ ನಡುಗಲ್ಲಿನಲ್ಲಿ ಬಸ್ ಇಳಿದು ಹೋಗಿದ್ದರು. ವಿಷಯ ಗಮನಕ್ಕೆ ಬರುವಾಗ ಬಸ್ ಹರಿಹರ ದಾಟಿದ್ದು ಬಳಿಕ ಪೋನ್ ಮುಖಾಂತರ ಕಂಡಕ್ಟರ್ ನ್ನು ಸಂಪರ್ಕಿಸಿದಾಗ ಪರ್ಸ್ ಸಿಕ್ಕಿರುವ ಮಾಹಿತಿ ತಿಳಿಸಿದ್ದಾರೆ.
ಇಂದು ಬೆಳಿಗ್ಗೆ ಬಸ್ ವಾಪಸ್ ಬರುವಾಗ ನಡುಗಲ್ಲಿನಲ್ಲಿ ವಾರಸುದಾರರಿಗೆ ಕಂಡಕ್ಟರ್ ರಾಮಚಂದ್ರ ಹಿಂತಿರುಗಿಸಿದ್ದಾರೆ ಎಂದು ತಿಳಿದು ಬಂದಿದೆ.
- Advertisement -