Thursday, May 2, 2024
Homeಕರಾವಳಿಬೆಳ್ತಂಗಡಿ; ಕೊಕ್ಕಡದ ಹೈಸ್ಕೂಲ್  ವಿದ್ಯಾರ್ಥಿನಿ ಪುತ್ತೂರಿನಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ

ಬೆಳ್ತಂಗಡಿ; ಕೊಕ್ಕಡದ ಹೈಸ್ಕೂಲ್  ವಿದ್ಯಾರ್ಥಿನಿ ಪುತ್ತೂರಿನಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ

spot_img
- Advertisement -
- Advertisement -

ಬೆಳ್ತಂಗಡಿ; ಹೈಸ್ಕೂಲ್  ವಿದ್ಯಾರ್ಥಿನಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಕೊಕ್ಕಡದಲ್ಲಿ ನಡೆದಿದೆ. ಕೊಕ್ಕಡ ಗ್ರಾಮದ ನೇತ್ರಾಳ ನಿವಾಸಿ ಶ್ರೀಧರ ಆಚಾರ್ಯ ಹಾಗೂ ದಿ.ಪುಷ್ಪ ದಂಪತಿ ಪುತ್ರಿ ರೇಖಾ(15) ಆತ್ಮಹತ್ಯೆ ಮಾಡಿಕೊಂಡ ವಿದ್ಯಾರ್ಥಿನಿ.

ಈಕೆಯ ತಾಯಿ  ವರ್ಷದ ಹಿಂದೆ ಜ್ವರದಿಂದ ಸಾವನ್ನಪ್ಪಿದ್ದರು. ತಂದೆ ಕೂಲಿ ಕೆಲಸ ಮಾಡುತ್ತಿದ್ದು, ತಾಯಿಯ ನಿಧನದ ಬಳಿಕ ರೇಖಾ ಮಾನಸಿಕವಾಗಿ ಕುಗ್ಗಿದ್ದಳು  ಎನ್ನಲಾಗಿದೆ .  ಆಕೆ ಸಂಬಂಧಿಕರ ಮನೆಯಿಂದ ಶಾಲೆ ಹೋಗುತ್ತಿದ್ದಳು . ಕೊಕ್ಕಡ ಪ್ರೌಢಶಾಲೆಯಲ್ಲಿ ವ್ಯಾಸಂಗ ಮಾಡುತ್ತಿದ್ದ ಆಕೆಯನ್ನು ಪುತ್ತೂರಿನ ಹಾಸ್ಟೆಲ್‌ಗೆ ಸೇರಿಸಿದ್ದರು ಎನ್ನಲಾಗಿದೆ.

ಕೊಕ್ಕಡ ಶಾಲೆಯಲ್ಲಿರುವಾಗ ಗೆಳತಿಯರೊಂದಿಗೆ ಉತ್ತಮವಾಗಿ ಬೆರೆತು ಕಲಿಕೆಯಲ್ಲಿ ಆಸಕ್ತಿ ಹೊಂದಿದ್ದಳು. ಆರಂಭದಲ್ಲಿ ಹಾಸ್ಟೆಲ್‌ಗೆ ಹೋಗಲು ನಿರಾಕರಿಸಿದ ಆಕೆ ಬಳಿಕ ಅತ್ತೆ ಒತ್ತಾಯದ ಮೇರೆಗೆ ಹಾಸ್ಟೆಲ್ ಸೇರಲು ಒಪ್ಪಿದ್ದಳು ಎನ್ನಲಾಗಿದೆ.ಅಲ್ಲಿ ಆಕೆ ಆತ್ಮಹತ್ಯೆಗೆ ಯತ್ನಿಸಿದ್ದಾಳೆ. ಕೂಡಲೇ ಆಕೆಯನ್ನು ಆಸ್ಪತ್ರೆಗೆ ಸೇರಿಸಿ ಚಿಕಿತ್ಸೆ ನೀಡಲಾಯಿತಾದರೂ ಚಿಕಿತ್ಸೆ ಫಲಿಸದೆ ಜೂ.11 ರಂದು ನಿಧನಳಾಗಿದ್ದಾಳೆ. ಪುತ್ತೂರು ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

- Advertisement -
spot_img

Latest News

error: Content is protected !!