- Advertisement -
- Advertisement -
ಘನ ವಾಹನಗಳು ದಕ್ಷಿಣ ಕನ್ನಡ ಜಿಲ್ಲೆಯ ಪುಂಜಾಲಕಟ್ಟೆ ಮಡಂತ್ಯಾರು -ಬಡಗಕಜೆಕಾರು ಬೆರ್ಕಳ ಗ್ರಾಮದಿಂದ ಹಾದುಹೋಗುವ ರಸ್ತೆಯಲ್ಲಿ ಸಂಚರಿಸಲು ಅವಕಾಶವಿಲ್ಲ.
ಆದರೂ ಸ್ಥಳೀಯರು 12 ಚಕ್ರದ ಘನ ವಾಹನಗಳು ಸಂಚರಿಸುತ್ತಿದೆ ಎಂದು ಆರೋಪಿಸಿದ್ದಾರೆ. ಇಲ್ಲಿ ಸಮೀಪದಲ್ಲಿ ಕಲ್ಲಿನ ಕೋರೆ ಇದ್ದು ಸುಮಾರು 50 ಟನ್ ಭಾರ ಇರುವ ಘನವಾಹನಗಳು ಆ ರಸ್ತೆಯ ಮೂಲಕ ಹಾದು ಹೋಗುವುದರಿಂದ ಘನ ವಾಹನಗಳಿಗೆ ಸಂಚರಿಸಲು ಸಾಮರ್ಥ್ಯವನ್ನು ಹೊಂದದ ರಸ್ತೆಯಲ್ಲಿ ಇದೀಗ 12 ಚಕ್ರದ ವಾಹನಗಳು ಸಂಚರಿಸುವುದು ರಸ್ತೆ ಹಾಳಾಗಲು ಕಾರಣವಾಗಿದೆ.
ಈ ಬಗ್ಗೆ ಡಿಸಿಗೂ ಮನವಿ ಸಲ್ಲಿಸಿದ್ದು ಆ ಮನವಿಗೆ ಇಲ್ಲಿಯವರೆಗೆ ಸ್ಪಂದನೆ ದೊರಕಿಲ್ಲ ಎಂದು ಊರಿನವರು ತಿಳಿಸಿದ್ದಾರೆ. ಮಾಜಿ ಜಿಲ್ಲಾ ಪಂಚಾಯತ್ ಸದಸ್ಯ ತುಂಗಪ್ಪ ಬಂಗೇರರು ಮತ್ತು ಗ್ರಾಮಸ್ಥರು ಆಕ್ರೋಶಕ್ಕೆ ಒಳಗಾಗಿದ್ದಾರೆ.
- Advertisement -