- Advertisement -
- Advertisement -
ಬೆಳ್ತಂಗಡಿ;ರಾಜ್ಯ ಗುಪ್ತಚರ ಇಲಾಖೆ ಹರೀಶ್ ಪೂಂಜ ಅವರಿಗೆ ಬೆದರಿಕೆ ಇರುವ ಬಗ್ಗೆ ವರದಿ ನೀಡಿದ್ದಾರೆ. ಹೀಗಾಗಿ ರಾಜ್ಯ ಅಂಗರಕ್ಷಕ ಭದ್ರತಾ ಪುನರ್ ವಿಮರ್ಶನ ಸಮಿತಿಯ ಸೂಚನೆ ಮೇರೆಗೆ ದಕ್ಷಿಣ ಕನ್ನಡ ಜಿಲ್ಲೆಯ ರಿಸರ್ವ್ ಪೊಲೀಸ್ (DR) ಪೇದೆ ಜೀವನ್ ಎಂಬವರನ್ನು ಎಂಎಲ್ಎ ಪೂಂಜ ಅವರಿಗೆ ಗನ್ ಮ್ಯಾನ್ ಆಗಿ ನೇಮಿಸಿದ್ದು ಇದೀಗ ಶಾಸಕರ ಜೊತೆ ಕರ್ತವ್ಯಕ್ಕೆ ಗನ್ ಮ್ಯಾನ್ ಜೀವನ್ ಹಾಜರಾಗಿದ್ದಾರೆ.
ಮೂರು ದಿನದ ಹಿಂದೆ ಎಸ್ಪಿಗೆ ಗುಪ್ತಚರ ಇಲಾಖೆ ಗನ್ ಮ್ಯಾನ್ ನೇಮಿಸಲು ಆದೇಶ ಮಾಡಿದ್ದರು. ಅದರಂತೆ ನಿನ್ನೆ ಗನ್ ಮ್ಯಾನ್ ದ.ಕ.ಎಸ್ಪಿ ನೇಮಿಸಿದ್ದಾರೆ.
- Advertisement -