- Advertisement -
- Advertisement -
ಬಂಟ್ವಾಳ: ಚುನಾವಣ ಆಯೋಗದ ನಿರ್ದೇಶನದಂತೆ ಹಿರಿಯ ನಾಗರಿಕರು ಹಾಗೂ ಅಂಗವಿಕಲರ ಮನೆಗಳಿಗೆ ಅಧಿಕಾರಿಗಳ ತಂಡ ತೆರಳಿ ಅಂಚೆ ಮತದಾನ ಮಾಡಿಸುವ ಕಾರ್ಯ ನಡೆಯುತ್ತಿದ್ದು, ಮಂಗಳವಾರ ಬಂಟ್ವಾಳ ಬಸ್ತಿಪಡಿ ನಲ್ಲಿರುವ ಮಾಜಿ ಕೇಂದ್ರ ಸಚಿವ ಬಿ. ಜನಾರ್ದನ ಪೂಜಾರಿ ಅವರ ಮನೆಗೆ ತೆರಳಿ ಮತದಾನ ಮಾಡಿಸಿದರು.
ಪೂಜಾರಿಯವರಿಗೆ 87 ವರ್ಷ ವಯಸ್ಸಾಗಿದ್ದು, ಕಳೆದ ವಿಧಾನಸಭೆ ಚುನಾವಣೆ ಸಂದರ್ಭದಲ್ಲೂ ಅವರಿಗೆ ಮನೆಯಲ್ಲೇ ಮತದಾನ ಮಾಡುವ ಅವಕಾಶವಿದ್ದರೂ ಬಂಟ್ವಾಳ ಎಸ್ವಿಎಸ್ ದೇವಳ ಶಾಲೆಯ ಮತದಾನ ಕೇಂದ್ರಕ್ಕೆ ತೆರಳಿ ಮತದಾನ ಮಾಡಿದ್ದರು
ಜಿಲ್ಲಾಧಿಕಾರಿ ಪರಿಶೀಲನೆ; ಜಿಲ್ಲಾ ಚುನಾವಣಾಧಿ ಕಾರಿಗಳೂ ಆಗಿರುವ ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್ ಎಂ.ಪಿ. ಅವರು ಮಂಗಳವಾರ ಮಂಗಳೂರು ನಗರದ ವಿವಿಧೆಡೆ ಖುದ್ದು ಸಿಬಂದಿಯೊಂದಿಗೆ ಭೇಟಿ ನೀಡಿ ಮನೆ ಮತದಾನ ಪ್ರಕ್ರಿಯೆಯನ್ನು ಪರಿಶೀಲಿಸಿದ್ದಾರೆ.
- Advertisement -