Friday, June 27, 2025
Homeಕರಾವಳಿಬೆಳ್ತಂಗಡಿ: ಭಾರೀ ಮಳೆಯಿಂದಾಗಿ ಪ್ರವಾಹ ಭೀತಿ; ಒಂದು ಗಂಟೆ ಸುರಿದ ಮಳೆಗೆ ತತ್ತರಿಸಿ ಹೋದ ಜನ

ಬೆಳ್ತಂಗಡಿ: ಭಾರೀ ಮಳೆಯಿಂದಾಗಿ ಪ್ರವಾಹ ಭೀತಿ; ಒಂದು ಗಂಟೆ ಸುರಿದ ಮಳೆಗೆ ತತ್ತರಿಸಿ ಹೋದ ಜನ

spot_img
- Advertisement -
- Advertisement -

ಬೆಳ್ತಂಗಡಿ: ನಿನ್ನೆ ಸಂಜೆ ಕೇವಲ ಒಂದು ಗಂಟೆ ಸುರಿದ ಮಳೆಯಿಂದಾಗಿ ಬೆಳ್ತಂಗಡಿಯ ಕೆಲವೆಡೆ ಜನ ಪ್ರವಾಹದ ಆತಂಕ ಎದುರಿಸುವಂತಾಗಿತ್ತು. ಪಶ್ಚಿಮಘಟ್ಟದಲ್ಲಿ ಭಾರೀ ಮಳೆಯ ಕಾರಣದಿಂದ ಮೃತ್ಯುಂಜಯ ನದಿ ಉಕ್ಕಿ ಹರಿದು ಪ್ರವಾಹ ಭೀತಿ ಎದುರಾಗಿತ್ತು.


ಏಕಾಏಕಿ ಮೃತ್ಯುಂಜಯ ನದಿ ಉಕ್ಕಿಹರಿಯಲು ಪ್ರಾರಂಭಿಸಿದ್ದರಿಂದ ಚಾರ್ಮಾಡಿ- ಕೊಳಂಬೆ ಸಂಪರ್ಕಿಸುವ ರಸ್ತೆಯೂ ಜಲಾವೃತವಾಗಿತ್ತು.ಮುಂಡಾಜೆ, ಕಲ್ಮಂಜ, ಕಡಿರುದ್ಯಾವರ, ಮಿತ್ತಬಾಗಿಲು ಮೊದಲಾದ ಗ್ರಾಮಗಳ ಕಡೆ ಹೆಚ್ಚಿನ ತೋಟಗಳಿಗೆ ಪ್ರವಾಹದ ನೀರು ನುಗ್ಗಿ ಕಡಿರುದ್ಯಾವರದಿಂದ 10 ಕಿಮಿ ದೂರದಲ್ಲಿರುವ ಬಂಡಾಜೆ ಜಲಪಾತ ತುಂಬಿ ಹರಿಯುವ ದೃಶ್ಯ ಕಡಿರುದ್ಯಾವರದಲ್ಲಿ ಗೋಚರಿಸುತ್ತಿತ್ತು.ಅಷ್ಟರ ಮಟ್ಟಿಗೆ ಮಳೆ ಬಂದಿತ್ತು.


ನೀರಿನೊಂದಿಗೆ ಅಪಾರ ಪ್ರಮಾಣದ ಮರಮಟ್ಟುಗಳು ತೇಲಿಬರುತ್ತಿರುವ ದೃಶ್ಯ ನೋಡಿದರೆ ಪಶ್ಚಿಮ ಘಟ್ಟದ ದಟ್ಟಾರಣ್ಯದ ನಡುವೆ ಎಲ್ಲಿಯೂ ಭೂ ಕುಸಿತವಾಗಿದೆ ಎಂಬ ಸಂದೇಹ ಉಂಟಾಗಿದೆ.2019 ರಲ್ಲಿ ಮೃತ್ಯುಂಜಯ ಹೊಳೆಯ ಪ್ರವಾಹ ರೂಪದಲ್ಲಿ ಹರಿದು ಹಲವು ಮನೆಗಳು ಕೊಚ್ಚಿ ಹೋಗಿತ್ತು, ಇಂದು ಮತ್ತೆ ಏಕಾಏಕಿ ಹೊಳೆ ಉಕ್ಕಿ ಹರಿದ ಕಾರಣ ನದಿ ಪಾತ್ರದ ಜನರಲ್ಲಿ ಆತಂಕಕ್ಕೆ ಕಾರಣವಾಗಿದೆ.ದಿಡುಪೆ, ಮಿತ್ತಬಾಗಿಲು, ಅರ್ಬಿ ಫಾಲ್ಸ್‌, ಕಡಮಗುಂಡಿ ಕಡೆಯಿಂದ ಬಂದ ನೀರಿನ ಪ್ರಮಾಣ ನೇತ್ರಾವತಿ ಉಕ್ಕಿ ಹರಿವಂತೆ ಮಾಡಿದ್ದು ಪ್ರವಾಹದ ಭೀತಿ ಎದುರಾಗಿತ್ತು.

ಘಟ್ಟ ಪ್ರದೇಶದಲ್ಲಿ ಸುರಿದ ಭಾರೀ ಮಳೆಯಿಂದಾಗಿ ನೀರು ಏರಿಕೆ ಯಾಗಿದೆ.ನೀರಿನ ಮಟ್ಟ 2019ರಲ್ಲಿ ಬಂದ ಪ್ರವಾಹವನ್ನು ಮೀರಿಸುವಂ ತಿತ್ತು ಎಂದು ಸ್ಥಳೀಯರು ತಿಳಿಸಿದ್ದಾರೆ. ಆದರೆ ನೇತ್ರಾವತಿ ಉಗಮ ಸ್ಥಳ ದಿಂದ ನೀರು ದೊಡ್ಡ ಪ್ರಮಾಣದಲ್ಲಿ ಬಾರದ ಕಾರಣ ಹೆಚ್ಚಿನ ಅನಾಹುತ ಆಗಿಲ್ಲ.

ನೀರಿನ ತೀವ್ರತೆಯಿಂದಾಗಿ ದಿಡುಪೆ ಮಲ್ಲ ಸಾಗುವ ರಸ್ತೆ ಸಂಪರ್ಕ ಕಡಿತಗೊಂಡಿದ್ದು, ಮಿತ್ತ ಬಾಗಿಲು, ದಿಡುಪೆ, ಬರ್ಕಳೊಟ್ಟು ಬನದಬಾಗಿಲು ಶಶಿಧರ್‌ ಅವರ ಮನೆ ವರೆಗೆ ನೀರು ನುಗ್ಗಿದ್ದು, ತೋಟ, ಗದ್ದೆ ಜಲಾವೃತವಾಗಿದೆ. ಸಮೀಪದ ಬಿರ್ಮನೊಟ್ಟು ರಾಜಪ್ಪ ಗೌಡರ ಮನೆಗೆ ನೀರು ನುಗ್ಗಿದೆ. ದಿಡುಪೆ ಪಂಚಾಯತ್‌ ಕಟ್ಟಡದ ಎದುರು ತಡೆಗೋಡೆಗೆ ಹಾನಿಯಾಗಿದ್ದು, ರಮೇಶ್‌ ಗೌಡರ ಮನೆಗೂ ನೀರು ನುಗ್ಗಿದೆ.

ಕೊಲ್ಲಿ-ಕಲೆಟ್ಟು ಪನಿಕಲ್‌ ಸಾಗುವ ರಸ್ತೆಯ ಮೋರಿ ಕುಸಿದಿದ್ದು, ರಸ್ತೆ ಸಂಚಾರಕ್ಕೆ ಸಮಸ್ಯೆಯಾಗಿದೆ. ಕುಕ್ಕಾವು ಹಾಗೂ ಎರ್ಮಾಲ್‌ ಪಲ್ಕೆ ಭಾಗದಲ್ಲಿ ಅತಿ ಹೆಚ್ಚು ನೀರು ಬಂದಿರುವುದರಿಂದ ನೇತ್ರಾವತಿ ನೀರು ಹರಿವು ಹೆಚ್ಚಳವಾಗಿದೆ. ಮಳೆ ಪ್ರಮಾಣ ಕಂಡಾಗ ಘಾಟಿಯ ಅಲ್ಲಲ್ಲಿ ನೀರಿನ ಝರಿ ಇಳಿಯುವ ದೃಶ್ಯ ಆತಂಕಕ್ಕೆ ಕಾರಣವಾಗಿತ್ತು.

ದಿಡುಪೆ ಗಣೇಶನಗರದ ಅಪಾಯ ದಲ್ಲಿರುವ ಮನೆ ಮಂದಿ ಯನ್ನು ಸ್ಥಳಾಂತರಿಸಲಾಗಿದೆ. ವಿಶೇಷವೆಂದರೆ, ಬೆಳ್ತಂಗಡಿ, ಉಜಿರೆ, ಧರ್ಮಸ್ಥಳ ಸಹಿತ ಬೇರ್ಯಾವ ಪ್ರದೇಶದಲ್ಲಿ ಮಳೆ ಸುರಿದಿಲ್ಲ. ಕೇವಲ ಘಟ್ಟ ಪ್ರದೇಶದಲ್ಲಿ ಬಂದ ಮಳೆಯಿಂದಾಗಿ ನೇತ್ರಾವತಿ ಉಕ್ಕಿ ಹರಿದು ಆತಂಕ ಸೃಷ್ಟಿಸಿತ್ತು.

- Advertisement -
spot_img

Latest News

error: Content is protected !!