ಚಿಕ್ಕಮಗಳೂರು : ಮೂಡಿಗೆರೆ ತಾಲೂಕಿನ ಕೊಟ್ಟಿಗೆಹಾರ ಸಮೀಪದ ರಸ್ತೆಯಲ್ಲಿ ನಿಂತು ವಾಹನದ ಮೇಲೆ ಗೆಳೆಯರು ಸೇರಿ ರೋಹಿತ್ ಪೈ ಎಂಬಾತನ ಹುಟ್ಟುಹಬ್ಬದ ಕೇಕ್ ಕಟ್ ಮಾಡಿ ಬಳಿಕ ಮುಖಕ್ಕೆ ಹಚ್ಚಿಕೊಂಡು ರಂಪಾಟ ಮಾಡುತ್ತಿದ್ದಾಗ ಮೇ.29 ರಂದು ರಾತ್ರಿ ಕರ್ತವ್ಯದಲ್ಲಿದ್ದ ಬಣಕಲ್ ಪೊಲೀಸರು ಸ್ಥಳಕ್ಕೆ ಹೋಗಿ ಪರಿಶೀಲನೆ ನಡೆಸಿ ಬೆಳ್ತಂಗಡಿ ಮೂಲದ 9 ಮಂದಿಯನ್ನು ವಶಕ್ಕೆ ಪಡೆದುಕೊಂಡು ಬಣಕಲ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ.
ಬೆಳ್ತಂಗಡಿ ತಾಲೂಕಿನ ಮಾಲಾಡಿ ಗ್ರಾಮದ ಶ್ರೀಧರ್ ಮಗ ಗಣೇಶ(24), ಮಾಲಾಡಿ ಗ್ರಾಮದ ಉಮೇಶ್ ಮಗ ಪ್ರದೀಪ(19),ಮಡಂತ್ಯಾರ್ ಗ್ರಾಮದ ಸುರೇಶ್ ಶೆಟ್ಟಿ ಮಗ ಸೂರಜ್ ಶೆಟ್ಟಿ(23),ಮಾಲಾಡಿ ಗ್ರಾಮದ ಶೇಖರ್ ಸಾಲಿಯನ್ ಮಗ ಸೂರಜ್.ಎಸ್.ಸಾಲಿಯಾನ(19),ಮಾಲಾಡಿ ಗ್ರಾಮದ ಶ್ರೀಧರ ಮಗ ಸುಜಿತ್(19), ಮಾಲಾಡಿ ಗ್ರಾಮದ ಪದ್ಮನಾಭ ಮಗ ಅಜಿತ್(18), ಮಡಂತ್ಯಾರ್ ಗ್ರಾಮದ ಇಬ್ರಾಹಿಂ ಮಗ ಮೊಹಮ್ಮದ್ ಅಶರಫ್, ಮಡಂತ್ಯಾರ್ ಗ್ರಾಮದ ರಮಾನಂದ ಪೈ ಮಗ ರೋಹಿತ್ ಪೈ(19), ಮಾಲಾಡಿ ಗ್ರಾಮದ ಶ್ರೀಧರ್ ಮಗ ಸುದೀಪ್(23) ವಿರುದ್ಧ ಪ್ರಕರಣ ದಾಖಲಾಗಿದೆ.