- Advertisement -
- Advertisement -
ಬೆಳ್ತಂಗಡಿ: ಇಲ್ಲಿನ ವಿವೇಕಾನಂದ ಸೇವಾಶ್ರಮದ ವತಿಯಿಂದ ಸ್ವಾಮಿ ವಿವೇಕಾನಂದರ 163ನೇ ಜನ್ಮ ಜಯಂತಿಯ ಪ್ರಯುಕ್ತ ತಾಲೂಕಿನ ಪ್ರೌಢಶಾಲಾ ವಿದ್ಯಾರ್ಥಿಗಳಿಗೆ ಪ್ರಬಂಧ ಸ್ಪರ್ಧೆಯನ್ನು ಏರ್ಪಡಿಸಲಾಗಿದೆ.
ಪ್ರಬಂಧ ಸ್ಪರ್ಧೆಯು ‘ವಿವೇಕಾನಂದರ ಜೀವನ ವ್ಯಕ್ತಿತ್ವ’ದ ಕುರಿತ ವಿಚಾರವನ್ನು ಒಳಗೊಂಡಿದೆ. ಪ್ರಬಂಧ ಸ್ಪರ್ಧೆಯಲ್ಲಿ ಭಾಗವಹಿಸುವ ವಿದ್ಯಾರ್ಥಿಗಳು ಪ್ರಬಂಧವನ್ನು ಬಿಳಿ ಹಾಳೆಯಲ್ಲಿ 200 ಪದಗಳಿಗೆ ಮೀರದಂತೆ ಸ್ವಬರಹದಲ್ಲಿ ಬರೆಯಬೇಕು. ಶಾಲಾ ಮುಖ್ಯಸ್ಥರ ದೃಢೀಕರಣದೊಂದಿಗೆ ಜ.11 ರ ಸಂಜೆ 5 ಗಂಟೆಯ ಒಳಗಾಗಿ “ಸಾಲಿಗ್ರಾಮ ಸುಪಾರಿ, ಸಂತೆಕಟ್ಟೆ, ಬೆಳ್ತಂಗಡಿ” ವಿಳಾಸಕ್ಕೆ ಕಳುಹಿಸಬೇಕಾಗಿ ಆಯೋಜಕರು ತಿಳಿಸಿದ್ದಾರೆ.
ವಿಜೇತರಿಗೆ ನಗದು ಬಹುಮಾನದೊಂದಿಗೆ ಸ್ಮರಣಿಕೆ ನೀಡಲಾಗುವುದು. ಹೆಚ್ಚಿನ ಮಾಹಿತಿಗಾಗಿ ದೂರವಾಣಿ ಸಂಖ್ಯೆ 8762611112 ಅನ್ನು ಸಂಪರ್ಕಿಸಬಹುದು.
- Advertisement -