- Advertisement -
- Advertisement -
ಮಂಗಳೂರು: ಮಹಿಳೆಯೊಬ್ಬರು ರೈಲ್ವೆ ಹಳಿಗೆ ಮರ ಬಿದ್ದಿದ್ದನ್ನು ಕಂಡು ಕೈಯಲ್ಲಿ ಕೆಂಪು ಬಟ್ಟೆ ಹಿಡಿದು ತೋರಿಸಿ ರೈಲು ಅಪಘಾತ ತಪ್ಪಿಸಿದ ಘಟನೆ ಮಂಗಳೂರು ಹೊರವಲಯದ ಪಚ್ಚನಾಡಿ ಸಮೀಪದ ಮಂದಾರ ಎಂಬಲ್ಲಿ ನಡೆದಿದೆ.
ಚಂದ್ರಾವತಿ(70 ವರ್ಷ) ಎಂಬುವವರೇ ಈ ಕಾರ್ಯ ಮಾಡಿದವರು. ಮಂಗಳೂರು-ಮುಂಬೈಗೆ ಮತ್ಸ್ಯಗಂಧ ರೈಲು ಸಂಚರಿಸುತ್ತಿದ್ದ ವೇಳೆ ಮರ ಬಿದ್ದಿದ್ದನ್ನು ಕಂಡ ಚಂದ್ರಾವತಿ ಮನೆಗೆ ಓಡಿ ಕೆಂಪು ಬಟ್ಟೆ ತಂದು ರೈಲು ನಿಲ್ಲಿಸುವಲ್ಲಿ ಯಶಸ್ವಿಯಾಗಿದ್ದು, ಇವರ ಈ ಕಾರ್ಯಕ್ಕೆ ವ್ಯಾಪಕ ಪ್ರಶಂಸೆ ವ್ಯಕ್ತವಾಗಿದೆ.
- Advertisement -