- Advertisement -
- Advertisement -
ಮಂಗಳೂರು: ಎಂ.ಸಿ.ಎಫ್ ವತಿಯಿಂದ ಸಿಎಸ್ಎಆರ್ ಅನುದಾನದಲ್ಲಿ , ಮಂಗಳೂರು ಉತ್ತರ ಶಾಸಕರಾದ ಡಾ.ವೈ.ಭರತ್ ಶೆಟ್ಟಿಯವರ ಮುತುವರ್ಜಿಯಲ್ಲಿ ಕೃತಕ ಕಾಲು , ವೀಲ್ ಚೇರ್ , ಕಂಪ್ಯೂಟರ್, ಮೊಬೈಲ್ ಫೋನ್ ಮುಂತಾದ ಸವಲತ್ತುಗಳ ವಿತರಣಾ ಕಾರ್ಯಕ್ರಮ ನಡೆಯಿತು.


ಕಲ್ಲಕಂಡದ ನಿವಾಸಿ ಮೋಹನ್ ಗಾಣಿಗ ಮತ್ತು 5 ನೇ ಅಡ್ಡ ರಸ್ತೆಯ ನಿವಾಸಿ ಪ್ರಶಾಂತ್ ಪಾಲೆಕರ್ ಅವರಿಗೆ ತಲಾ ಒಂದುವರೆ ಲಕ್ಷ ಮೌಲ್ಯದ ಕೃತಕ ಕಾಲನ್ನು ಹಸ್ತಾಂತರಿಸಲಾಯಿತು.

ಈ ಸಂದರ್ಭದಲ್ಲಿ ಮಹಾಪೌರರಾದ ಪ್ರೇಮಾನಂದ ಶೆಟ್ಟಿ , ಎಂ.ಸಿ.ಎಫ್ ನ ಮುಖ್ಯಸ್ಥರಾದ ಪ್ರಭಾಕರ್ ರಾವ್, ಖ್ಯಾತ ವೈದ್ಯರಾದ ಡಾ . ಶಾಂತರಾಂ ಶೆಟ್ಟಿ , ಮ.ನ.ಪಾ ಸದಸ್ಯರುಗಳಾದ ಮನೋಜ್ ಕುಮಾರ್, ಸುಮಿತ್ರ ಕರಿಯ, ಸುನಿತಾ ಉಪಸ್ಥಿತರಿದ್ದರು .
- Advertisement -