ಬೆಳ್ತಂಗಡಿ : ಸಾಮಾನ್ಯ ಸಭೆಯಲ್ಲಿ ನಡೆದ ಚರ್ಚೆ ಸಂದರ್ಭದಲ್ಲಿ ಏರು ಧ್ವನಿಯಲ್ಲಿ ಸಭೆಯಿಂದ ಹೊರ ನಡೆಯಿರಿ ಎಂದು ಗ್ರಾ.ಪಂ.ಸದಸ್ಯರಿಗೆ ಕೊಯ್ಯೂರು ಗ್ರಾಮ ಪಂಚಾಯತ್ ಅಧ್ಯಕ್ಷೆ ಹೇಳಿಕೆ ವಿರುದ್ಧ ಸದಸ್ಯ ಜಗನ್ನಾಥರಿಂದ ಪಂಚಾಯತ್ ಅಧ್ಯಕ್ಷರ ಹಕ್ಕುಚ್ಯುತಿ ಮಂಡನೆಗೆ ಮನವಿ ಮಾಡಿದ್ದಾರೆ.

ಕೊಯ್ಯುರು ಗ್ರಾಮ ಪಂಚಾಯತ್ ಬಿಜೆಪಿ ಬೆಂಬಲಿತ ಮಾಜಿ ಅಧ್ಯಕ್ಷ ಹಾಲಿ ಸದಸ್ಯ ಜಗನ್ನಾಥ ಎಂಬವರಿಂದ ಗ್ರಾಮ ಪಂಚಾಯತ್ ಸಾಮಾನ್ಯ ಸಭೆಯಲ್ಲಿ ಬಿಜೆಪಿ ಬೆಂಬಲಿತ ಗ್ರಾಮ ಪಂಚಾಯತ್ ಅಧ್ಯಕ್ಷೆ ಶ್ರೀಮತಿ ದಯಮಣಿ ಅವರು ಜೂ.18 ರಂದು ನಡೆದ 18 ನೇ ಸಾಮಾನ್ಯ ಸಭೆಯಲ್ಲಿ ಭಾಗವಹಿಸಿದ ಸಂದರ್ಭದಲ್ಲಿ ಅನುದಾನದ ವಿಚಾರದಲ್ಲಿ ಚರ್ಚೆ ನಡೆದ ಸಂದರ್ಭದಲ್ಲಿ ಜಗನ್ನಾಥ್ ಅವರನ್ನು “ಸಭೆಯಿಂದ ಹೊರ ನಡೆಯಿರಿ ಎಂಬ ಏರು ಧ್ವನಿಯಲ್ಲಿ” ಅಧ್ಯಕ್ಷೆ ದಯಾಮಣಿಯವರು ಮಾತಾಡಿದ್ದಕ್ಕಾಗಿ ತನಗೆ ಅವಮಾನ ಆಗಿದೆ ಎಂದು ಗ್ರಾಮ ಪಂಚಾಯತ್ ಬಿಜೆಪಿ ಬೆಂಬಲಿತ ಹಾಲಿ ಸದಸ್ಯ ಜಗನ್ನಾಥ ತಾಲೂಕು ಪಂಚಾಯತ್ ಕಾರ್ಯನಿರ್ವಹಕ ಅಧಿಕಾರಿ ಭವಾನಿ ಶಂಕರ್ ಅವರಿಗೆ ಮನವಿಯನ್ನು ಸಲ್ಲಿಸಿದ್ದಾರೆ.