Wednesday, July 9, 2025
Homeಕರಾವಳಿಸಚಿವ ಸಂಪುಟ ಸಭೆಯಲ್ಲಿ ಮಂಗಳೂರು ಜಿಲ್ಲೆ ಎಂದು ಘೋಷಿಸಿ; ವಿಧಾನ ಪರಿಷತ್‌ ಸದಸ್ಯ ಐವನ್‌ ಡಿʼಸೋಜಾರಿಂದ...

ಸಚಿವ ಸಂಪುಟ ಸಭೆಯಲ್ಲಿ ಮಂಗಳೂರು ಜಿಲ್ಲೆ ಎಂದು ಘೋಷಿಸಿ; ವಿಧಾನ ಪರಿಷತ್‌ ಸದಸ್ಯ ಐವನ್‌ ಡಿʼಸೋಜಾರಿಂದ ಮುಖ್ಯಮಂತ್ರಿಗಳಿಗೆ ಮನವಿ

spot_img
- Advertisement -
- Advertisement -

ಮಂಗಳೂರು: ವಿಧಾನ ಪರಿಷತ್‌ ಸದಸ್ಯ ಐವನ್‌ ಡಿʼಸೋಜಾರವರು ಮುಖ್ಯಮಂತ್ರಿಗಳನ್ನು ಗೃಹ ಕಛೇರಿಯಲ್ಲಿ ಭೇಟಿ ಮಾಡಿ, ವಿಜಯಪುರದಲ್ಲಿ ಸಚಿವ ಸಂಪುಟ ಸಭೆ ನಡೆದ ನಂತರ ಕರಾವಳಿ ಭಾಗದ ಸಚಿವ ಸಂಪುಟ ಸಭೆಯನ್ನು ಮಂಗಳೂರಿನಲ್ಲಿ ನಡೆಸುವ ಮೂಲಕ ಕರಾವಳಿ ಭಾಗದ ಜನರ ಸಮಸ್ಯೆ ಹಾಗೂ ಜಾರಿಯಾಗದಂತಹ ಯೋಜನೆಗಳನ್ನು ಜಾರಿಗೆ ತರುವ ಬಗ್ಗೆ ಸಚಿವ ಸಂಪುಟದಲ್ಲಿ ತೀರ್ಮಾನ ತೆಗೆದುಕೊಳ್ಳಬೇಕೆಂದು ಮನವಿಯನ್ನು ಸಲ್ಲಿಸಿದರು.

ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರು ಈ ಮನವಿಯನ್ನು ಸ್ವೀಕರಿಸಿದ್ದು, ದೆಹಲಿ ಪ್ರವಾಸದಿಂದ ವಾಪಾಸ್ಸಾದ ನಂತರ ಈ ಬಗ್ಗೆ ಕ್ರಮ ಕೈಗೊಳ್ಳುವುದಾಗಿ ತಿಳಿಸಿದರು ಎನ್ನಲಾಗಿದೆ.

ಈ ಸಂದರ್ಭದಲ್ಲಿ ಮಾನ್ಯ ಮುಖ್ಯಮಂತ್ರಿಗಳಿಗೆ ದ.ಕ. ಜಿಲ್ಲೆಯಮತ್ತು ಕರಾವಳಿ ಭಾಗದ ತಲಪಾಡಿಯಿಂದ ಕಾರವಾರದವರೆಗೆ ಇರುವ ಕೋಸ್ಟಲ್‌ ಭಾಗದ ಜನರ ಸಮಸ್ಯೆಗಳಿಗೆ ಮತ್ತು ಪ್ರವಾಸೋಧ್ಯಮಕ್ಕೆ ಸೂಕ್ತವಾದ ಜಿಲ್ಲೆಗಳಿಗೆ & ಪ್ರತ್ಯೇಕವಾದ ಪ್ರವಾಸೋಧ್ಯಮಕ್ಕೆ ನೀಡಿ ಮೀನುಗಾರಿಕೆಗೆ ಇರುವ ಸಮಸ್ಯೆಗಳು ಈ ಬಗ್ಗೆ ತೆಗೆದುಕೊಳ್ಳಬೇಕಾದ ಕ್ರಮಗಳು ಅದೇ ರೀತಿ ಬೀಡಿ ಕಾರ್ಮಿಕರು ಅತ್ಯಂತ ಹೆಚ್ಚು ಇರುವ ಜಿಲ್ಲೆ ಇದಾಗಿದ್ದು, ಅವರಿಗೆ ಪುನರ್ವಸತಿ ಕಲ್ಪಿಸುವ ಜೊತೆಯಲ್ಲಿ ಮಂಗಳೂರಿನ NITK ಯನ್ನು IITK ಯಾಗಿ ಪರಿವರ್ತಿಸುವಂತಹದ್ದು, ಕೈಗಾರಿಕಾ ಮತ್ತು ಇತರ ಉದ್ಯಮಗಳಿಂದ ಉದ್ಯೋಗ ಅವಕಾಶವನ್ನು ದೊರಕಿಸುವಂತದ್ದು, ಶೈಕ್ಷಣಿಕವಾಗಿ ಈಗಾಗಲೇ ಪ್ರಸಿದ್ದಿ ಪಡೆದಿರುವ ದ.ಕ. ಜಿಲ್ಲೆಯನ್ನು ಮುಂದಕ್ಕೆ ಶೈಕ್ಷಣಿಕ ಕೇಂದ್ರವನ್ನಾಗಿ ಮಾಡಿ ಶಿಕ್ಷಣಕ್ಕೆ ಸಂಬಂಧಪಟ್ಟಂತಹ ಮತ್ತು ಉದ್ಯೋಗಕ್ಕೆ ಸಂಬಂಧಪಟ್ಟಂತಹ ಯೋಜನೆಗಳನ್ನು ರೂಪಿಸಲು ಕ್ರಮ ಕೈಗೊಳ್ಳುವಂತದ್ದು ಮತ್ತು ಅನೇಕ ಇತರ ಯೋಜನೆಗಳ ಬಗ್ಗೆ ಚರ್ಚೆ ನಡೆಸುವಲ್ಲಿ ಕರ್ನಾಟಕದ ಕರಾವಳಿ ಭಾಗದ ಅಭಿವೃದ್ದಿ ಹೈಕೋರ್ಟ್‌ ಸಂಚಾರಿ ಪೀಠದ ಬಗ್ಗೆ ಸರಕಾರ ಕ್ರಮಕೈಗೊಳ್ಳುವ ಅಗತ್ಯವಿರುದರಿಂದ ಸಚಿವ ಸಂಪುಟ ಸಬೆ ಕರಾವಳಿ ಭಾಗದ ಅತ್ಯಂತ ಸೂಕ್ತವಾದ ಪ್ರದೇಶವಾಗಿದೆ.ಕರಾವಳಿ ಭಾಗದಲ್ಲಿ ಅಭಿವೃದ್ದಿಗೊಳ್ಳುವುದಕ್ಕೆ ಸಹಾಯವಾಗುತ್ತದೆ. ಅಷ್ಟೇ ಅಲ್ಲದೆ ದಕ್ಷಿಣ ಕನ್ನಡ ಎನ್ನುವ ಜಿಲ್ಲೆಯ ಹೆಸರನ್ನು ಮಂಗಳೂರು ಜಿಲ್ಲೆ ಎಂದು ಮಾಡಲು ಅನೇಕ ಜನರ ಬೇಡಿಕೆ ಇದ್ದು, ಈ ಬೇಡಿಕೆಯನ್ನು ಪರಿಶೀಲಿಸಿ ಸಚಿವ ಸಂಪುಟ ಸಭೆ ನಡೆದಲ್ಲಿ ಸರಕಾರ ಈಡೇರಿಸಲು ಕ್ರಮ ಕೈಗೊಳ್ಳಬೇಕೆಂದು ಐವನ್‌ ಡಿʼಸೋಜಾರವರು ಮುಖ್ಯಮಂತ್ರಿಯವರಲ್ಲಿ ವಿನಂತಿಸಿದ್ದಾರೆ.

- Advertisement -
spot_img

Latest News

error: Content is protected !!