Thursday, June 26, 2025
Homeಕರಾವಳಿಮಂಗಳೂರುಮಂಗಳೂರು; "ಕೆನರಾ ಬ್ಯಾಂಕ್ ವತಿಯಿಂದ ದೇಶ ವಿಭಜನೆಯ ಕರಾಳ ದಿನಾಚರಣೆ"

ಮಂಗಳೂರು; “ಕೆನರಾ ಬ್ಯಾಂಕ್ ವತಿಯಿಂದ ದೇಶ ವಿಭಜನೆಯ ಕರಾಳ ದಿನಾಚರಣೆ”

spot_img
- Advertisement -
- Advertisement -

ಮಂಗಳೂರು; ಸಾಮಾಜಿಕ ವಿಭಜನೆ, ಅಸಾಮರಸ್ಯದ ವಿಷವನ್ನು ತೆಗೆದುಹಾಕುವ ಮತ್ತು ಏಕತೆ, ಸಾಮಾಜಿಕ ಸಾಮರಸ್ಯ ಮತ್ತು ಮಾನವ ಸಬಲೀಕರಣದ ಚೈತನ್ಯವನ್ನು ಇನ್ನಷ್ಟು ಬಲಪಡಿಸುವ ಅಗತ್ಯವನ್ನು ವಿಭಜನೆಯ ಭೀಕರ ದಿನವು ನೆನಪಿಸುತ್ತದೆ ಈ ನಿಟ್ಟಿನಲ್ಲಿ ಆಗಸ್ಟ್ 14ನ್ನು ದೇಶದಾದ್ಯಂತ ‘ದೇಶ ವಿಭಜನೆ ಕರಾಳ ದಿನ’ವನ್ನಾಗಿ ಆಚರಿಸಲಾಗುತ್ತದೆ. ಆ ಪ್ರಯುಕ್ತ ಕೆನರಾ ಬ್ಯಾಂಕ್ ಪ್ರಾದೇಶಿಕ ಕಛೇರಿ ಮಂಗಳೂರು, ಲೀಡ್ ಬ್ಯಾಂಕ್ ಕಛೇರಿ ದಕ್ಷಿಣ ಕನ್ನಡ ವತಿಯಿಂದ ಆಗಸ್ಟ್ 13-14 ರಂದು ದೇಶ ವಿಭಜನೆಯ ಕಾಲದಲ್ಲಿ ನಡೆದ ವಿದ್ಯಮಾನಗಳ ತುಣುಕುಗಳ ಪ್ರದರ್ಶನ ಕಾರ್ಯಕ್ರಮವನ್ನು ಕೆನರಾ ಬ್ಯಾಂಕ್ ವೃತ್ತ ಕಛೇರಿ ಆವರಣ ಬಲ್ಮಠ ಮಂಗಳೂರು ಇಲ್ಲಿ ಆಯೋಜಿಸಲಾಗಿತ್ತು.

ಕಾರ್ಯಕ್ರಮವನ್ನು   ಶ್ರೀ ಬಿ. ಸುಧಾಕರ ಕೊಟ್ಟಾರಿ , ಮಹಾಪ್ರಬಂಧಕರು ಕೆನರಾ ಬ್ಯಾಂಕ್ ವೃತ್ತ ಕಛೇರಿ ಮಂಗಳೂರು ಇವರು ನೆರವೇರಿಸಿದರು. ಕಾರ್ಯಕ್ರಮದಲ್ಲಿ ಕೆನರಾ ಬ್ಯಾಂಕ್ ವೃತ್ತ ಕಛೇರಿ ಮಂಗಳೂರು ಇಲ್ಲಿನ ಡಿಜಿಎಮ್ ಶ್ರೀ ಶೈಲೇಂದ್ರನಾಥ್ ಶೀತ್ , ಶ್ರೀ ಟಿ ಯು ಜಯಕುಮಾರ್,  ಕೆನರಾ ಬ್ಯಾಂಕ್ ಪ್ರಾದೇಶಿಕ ಕಛೇರಿ ವ್ಯವಸ್ಥಾಪಕರು ಶ್ರೀ ಉಮಾಶಂಕರ್ ಪ್ರಸಾದ್ , ದಕ್ಷಿಣ ಕನ್ನಡ ಲೀಡ್ ಬ್ಯಾಂಕ್ ಮುಖ್ಯ ಪ್ರಬಂಧಕರು ಶ್ರೀಮತಿ ಕವಿತಾ ಎನ್.ಶೆಟ್ಟಿ ಮತ್ತು ಬ್ಯಾಂಕ್ ಸಿಬ್ಬಂದಿ ಮತ್ತು ಗ್ರಾಹಕರು ಉಪಸ್ಥಿತರಿದ್ದರು.

- Advertisement -
spot_img

Latest News

error: Content is protected !!