- Advertisement -
- Advertisement -
ಮಂಗಳೂರು; ತುಳುನಾಡಿನ ನಂಬಿಕೆಯ ದೈವಾರಾಧನೆ ಇಂದು ಹೆಜ್ಜೆ ತಪ್ಪಿ ನಡೆಯುತ್ತಿದೆ. ಧಾರ್ಮಿಕ ಮನೋಭಾವನೆಯಿಂದ ಶ್ರದ್ಧೆ, ಭಯ, ಭಕ್ತಿಯಿಂದ ನಡೆಯುತ್ತಿದ್ದ ದೈವಾರಾಧನೆ ಇಂದು ವ್ಯಾವಹಾರಿಕವಾಗಿ ನಡೆಯುತ್ತಿರುವುದು ಅತ್ಯಂತ ಖೇದನೀಯ. ಅ ನಿಟ್ಟಿನಲ್ಲಿ ಅರಿವು ಮೂಡಿಸುವ ಸಲುವಾಗಿ; ತುಳುನಾಡ ದೈವಾರಾಧನೆ ಸಂರಕ್ಷಣಾ ವೇದಿಕೆ (ರಿ.) ವತಿಯಿಂದ ದೈವಾರಾಧನೆಗ್ ಒಂಜಿ ದಿನ , ನಂಬಿಕೆ ಒರಿಪಾಗ ಕಾರ್ಯಕ್ರಮ ವನ್ನು ಹಮ್ಮಿಕೊಳ್ಳಲಾಗಿದೆ.
ದಿನಾಂಕ : 01-09-2024ನೇ ಭಾನುವಾರ ಬೆಳಗ್ಗೆ 9 ಗಂಟೆಗೆ ಸಹಕಾರಿ ಸದನ, ಕಾವೂರು ಬೊಂದೆಲ್ ಇಲ್ಲಿ ಕಾರ್ಯಕ್ರಮ ಉದ್ಘಾಟನೆಗೊಳ್ಳಲಿದೆ. ಸಾಕಷ್ಟು ಸಂಖ್ಯೆಯಲ್ಲಿ ತುಳು ಬಾಂಧವರು ಕಾರ್ಯಕ್ರಮದಲ್ಲಿ ಭಾಗಿಯಾಗಲು ಕೇಳಿಕೊಳ್ಳಲಾಗಿದೆ.
- Advertisement -